ADVERTISEMENT

‘ಐ.ಟಿ. ಬಳಸಿ ಕಟ್ಟಿ ಹಾಕುವ ಹುನ್ನಾರ’

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 11:00 IST
Last Updated 16 ನವೆಂಬರ್ 2017, 11:00 IST

ಕನಕಪುರ: ಕಾಂಗ್ರೆಸ್‌ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಬಿ.ಜೆ.ಪಿ., ಆದಾಯ ತೆರಿಗೆ ಇಲಾಖೆ (ಐ.ಟಿ.) ಅಸ್ತ್ರ ಬಳಸಿ ಕಟ್ಟಿಹಾಕುವ ಹುನ್ನಾರ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಪಕ್ಷದ ಜಿಲ್ಲಾ ಮಾಧ್ಯಮ ವಕ್ತಾರ ಮರಸಪ್ಪ ರವಿ ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ಮತ್ತು ಅವರ ಕುಟುಂಬದ ಮೇಲೆ ಐ.ಟಿ. ದಾಳಿ ನಡೆಸಿ ಅನಗತ್ಯವಾಗಿ ಕಿರುಕುಳ ಕೊಡಲಾಗುತ್ತಿದೆ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಗುಜರಾತ್ ಶಾಸಕರನ್ನು ಕರೆತಂದು ಪಕ್ಷದ ಗೆಲುವಿಗೆ ಶ್ರಮಿಸಿದ್ದು ಬಿ.ಜೆ.ಪಿ.ಗೆ ನುಂಗಲಾರದ ತುತ್ತಾಗಿ ಬಿ.ಜೆ.ಪಿ. ತಮ್ಮ ಅಧೀನದಲ್ಲಿರುವ ಐ.ಟಿ. ಸಂಸ್ಥೆಯನ್ನು ದಾಳವಾಗಿ ಬಳಸಿಕೊಂಡು ಶಿವಕುಮಾರ್‌ ಅವರನ್ನು ಮಣಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ರಾಜ್ಯದ ಜನರು ಬಿ.ಜೆ.ಪಿ. ವಿರುದ್ದ ತಿರುಗಿ ಬೀಳುವ ಮೊದಲು ಬಿ.ಜೆ.ಪಿ.ಯವರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾ ದಲ್ಲಿ ರಾಜ್ಯದ ಜನತೆಯೇ ಚುನಾವಣೆ ಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.