ADVERTISEMENT

ಮರ ಉಳಿಸಿದ ವಿದ್ಯಾರ್ಥಿಗಳು !

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 8:41 IST
Last Updated 3 ಮಾರ್ಚ್ 2017, 8:41 IST

ಮಾಗಡಿ: ಪುರಸಭೆ ಕಸವನ್ನು ಮರದ ಬುಡಕ್ಕೆ ಸುರಿದು ಮರಗಳನ್ನು ಸುಡುವ ಯತ್ನವನ್ನು ಕೈಬಿಡುವಂತೆ ಸರ್ಕಾರಿ ಉರ್ದು ಶಾಲೆಯ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಪಟ್ಟಣದ ಸರ್ಕಾರಿ ಉರ್ದು ಶಾಲೆಯ ಆವರಣದ ಮುಂದಿರುವ ಬೂರುಗದ ಮದರ ಬುಡಕ್ಕೆ ಪುರಸಭೆಯ ಕಸ ಸುರಿದು ಗುರುವಾರ ಬೆಂಕಿ ಹಚ್ಚಲಾಗಿತ್ತು.

ಮರದ ಬುಡಕ್ಕೆ ಕಸ ಸುರಿದು ಬೆಂಕಿ ಹಚ್ಚಿದ್ದರಿಂದ ಮರದ ಬುಡ ಗಮನಿಸಿದ ಸೈಯದ್‌, ರೆಹಮಾನ್‌, ನವಾಜ್‌ ತಂಡದ ವಿದ್ಯಾರ್ಥಿಗಳು ತಕ್ಷಣ ಕಾರ್ಯೋನ್ಮುಖರಾಗಿ ಮರದ ಬುಡದಿಂದ ಬೆಂಕಿಯನ್ನು ದೂರ ತಳ್ಳಿ ಮರವನ್ನು ರಕ್ಷಿಸಿದರು. ಪುರಸಭೆಯ ಅಧಿಕಾರಿಗಳು ಮತ್ತೊಮ್ಮೆ ಮರದ ಬುಡಕ್ಕೆ ಕಸ ಸುರಿದು ಬೆಂಕಿ ಹಚ್ಚುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.