ADVERTISEMENT

ಇದೇ 10ರಂದು ಹೋರಾಟಗಾರರ ಸಭೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 8:42 IST
Last Updated 6 ಜನವರಿ 2018, 8:42 IST
ಇದೇ 10ರಂದು ಹೋರಾಟಗಾರರ ಸಭೆ
ಇದೇ 10ರಂದು ಹೋರಾಟಗಾರರ ಸಭೆ   

ರಾಮನಗರ: ಬೆಂಗಳೂರಿನಲ್ಲಿ ಇದೇ 10ರಂದು ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ರೈತರ ಸಭೆ ಆಯೋಜಿಸಲಾಗಿದೆ‌. ಮಹದಾಯಿ ವಿವಾದ ಬಗೆಹರಿಸದ ರಾಜಕೀಯ ಪಕ್ಷಗಳ ನಡೆ ವಿರೋಧಿಸಿ ಬಂದ್ ಆಚರಿಸುವ ಸಂಬಂಧ ಅಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜು ತಿಳಿಸಿದರು.

ಇಲ್ಲಿನ ಐಜೂರು ವೃತ್ತದಲ್ಲಿ ಶನಿವಾರ ಮೇಕೆದಾಟು ಹಾಗೂ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು‌. ಮಹದಾಯಿ ವಿಚಾರದಲ್ಲಿ ಬಿ‌.ಎಸ್‌‌. ಯಡಿಯೂರಪ್ಪ ದೊಡ್ಡ ನಾಟಕದ ಮೂಲಕ ಜನರನ್ನು ಯಾಮಾರಿಸುತ್ತಿದ್ದಾರೆ. ಪ್ರಧಾನಿ ಮೋದಿ ಇನ್ನಾದರೂ ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT