ಕುದೂರು(ಮಾಗಡಿ): ತರಕಾರಿ ಮಾರಾಟಗಾರರಿಗೆ ₹6ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಿಸಲಾಗುವುದು ಎಂದು ಮುಖಂಡ ಹನುಮಂತರಾಯಪ್ಪ ತಿಳಿಸಿದರು.
ಗ್ರಾಮದ ಸಂತೆ ಮೈದಾನದಲ್ಲಿ ಶೆಡ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ತರಕಾರಿ ಬೆಳೆಯುವ ರೈತರಿಗೆ ಎಪಿಎಂಸಿ ವತಿಯಿಂದ ಹೆಚ್ಚಿನ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುಖಂಡರಾದ ಅನುಸೂಯ ಮರಿಗೌಡ ತಿಳಿಸಿದರು.
ಕುದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ, ಸದಸ್ಯರಾದ ಹೊನ್ನರಾಜು, ಬಾಲಕೃಷ್ಣ, ಎಪಿಎಂಸಿ ನಿರ್ದೇಶಕರಾದ ಕೆಂಪಸಾಗರದ ಮಂಜುನಾಥ, ಮಾರೇಗೌಡ , ಮುಖಂಡ ಕಾಗಿಮಡು ಜಗದೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.