ADVERTISEMENT

ಸಾಮಾಜಿಕ ನ್ಯಾಯ ಕಾಂಗ್ರೆಸ್‌ನ ನಿಲುವು: ಕಾಗೋಡು

​ಪ್ರಜಾವಾಣಿ ವಾರ್ತೆ
Published 16 ಮೇ 2017, 5:16 IST
Last Updated 16 ಮೇ 2017, 5:16 IST

ಆನವಟ್ಟಿ: ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್‌ ಬದ್ಧವಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ಆನವಟ್ಟಿಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಬಡವರಿಗೆ ಭೂಮಿ ನೀಡಿದರೆ ಮುಕ್ತಿ ದೊರೆಯುತ್ತದೆ. ಇಂಥ ಪುಣ್ಯದ ಕಾರ್ಯ ಮಾಡಲು ಶ್ರಮ ಪಡಬೇಕು ಎಂದರು.ಅರಣ್ಯಹಕ್ಕು ಅರ್ಜಿಗಳನ್ನು ಸಮಿತಿ ಸದಸ್ಯರು ವಜಾ ಮಾಡಬೇಕೆ ಹೊರತು ಪಿಡಿಒಗಳಲ್ಲ. ಫಲಾ ನುಭವಿಗಳಿಗೆ ತೊಂದರೆ  ಕೊಡಬಾರದು ಎಂದು  ತಾಕೀತು ಮಾಡಿದರು.

ಆನವಟ್ಟಿ ಪದವಿ ಕಾಲೇಜಿಗೆ  ಉಪನ್ಯಾಸಕರನ್ನು  ಮುಂಬರುವ ಶೈಕ್ಷಣಿಕ ವರ್ಷದಿಂದ ನೇಮಿಸ ಲಾಗು ವುದು ಎಂದು ಭರವಸೆ ನೀಡಿದರು.ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ, ಪ್ರಭಾಕರ, ತಾಲ್ಲೂಕು ಪಂಚಾಯ್ತಿ ಸದಸ್ಯ ಪಿ.ಹನುಮಂತಪ್ಪ, ಚೌಟಿ ಚಂದ್ರಶೇಖರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.