ADVERTISEMENT

ಸಾಯಿನ್ ಬಾಬಾ ದರ್ಗಾ ಉರುಸ್

​ಪ್ರಜಾವಾಣಿ ವಾರ್ತೆ
Published 16 ಮೇ 2017, 5:02 IST
Last Updated 16 ಮೇ 2017, 5:02 IST
ಹಜರತ್ ಅಲ್ಲಾ ಅಲ್ಲಾ ಸಾಯಿನ್ ಬಾಬಾ ದರ್ಗಾದ ಉರುಸ್‌ನಲ್ಲಿ ಪಾಲ್ಗೊಂಡ ಭಕ್ತರು
ಹಜರತ್ ಅಲ್ಲಾ ಅಲ್ಲಾ ಸಾಯಿನ್ ಬಾಬಾ ದರ್ಗಾದ ಉರುಸ್‌ನಲ್ಲಿ ಪಾಲ್ಗೊಂಡ ಭಕ್ತರು   

ತುಮಕೂರು: ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿರುವ ‘ಹಜರತ್ ಅಲ್ಲಾ ಅಲ್ಲಾ ಸಾಯಿನ್ ಬಾಬಾ ದರ್ಗಾ’ ಉರುಸ್ ಮಂಗಳವಾರ ರಾತ್ರಿ ನಡೆಯಿತು.

ಉರುಸ್ ಪ್ರಯುಕ್ತ ದರ್ಗಾಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದಲೇ ದರ್ಗಾಕ್ಕೆ ನಗರದ ವಿವಿಧ ಭಾಗದ ಹಾಗೂ ಬೇರೆ ಜಿಲ್ಲೆಯ ಭಕ್ತರು ಬಂದು ಪ್ರಾರ್ಥಿಸಿದರು.

ವಿಶೇಷವಾಗಿ ಸಂಜೆ ಬೆಂಗಳೂರು, ಕೋಲಾರ, ಚಿಂತಾಮಣಿ, ಗುಬ್ಬಿ, ಅರಸೀಕೆರೆ, ಚಿಕ್ಕಮಗಳೂರು, ಕೆಸರಮಡವು ಭಕ್ತರು ಬಂದಿದ್ದರು ಎಂದು ದರ್ಗಾ ಮುಖ್ಯಸ್ಥರು ತಿಳಿಸಿದರು.

ADVERTISEMENT

ರಾತ್ರಿ ದರ್ಗಾದಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿತು.  ಮೆರವಣಿಗೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಅಹೋರಾತ್ರಿ ಕವ್ವಾಲಿ: ಪ್ರತಿ ವರ್ಷದಂತೆ ಈ ವರ್ಷವೂ ಅಹೋರಾತ್ರಿ ಕವ್ವಾಲಿ ಕಾರ್ಯಕ್ರಮ ನಡೆಯಿತು.
ಹೈದರಾಬಾದ್‌ನ  ನವಾಜ್, ಸಬಿಹಾ, ತುಮಕೂರಿನ ಶಮ್‌ಷೇರ್ ಷಾ ಖಾದ್ರಿ ಅವರು ಕವ್ವಾಲಿ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.