ADVERTISEMENT

ಮುಖ್ಯಮಂತ್ರಿಯೊಂದಿಗೆ ಚರ್ಚೆ: ಮೊಯಿಲಿ

ಹೆಬ್ರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ– ತಾಲ್ಲೂಕು ರಚನೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 10:12 IST
Last Updated 7 ಮಾರ್ಚ್ 2017, 10:12 IST
ಹೆಬ್ರಿ: ಹೆಬ್ರಿ ತಾಲ್ಲೂಕು ರಚನೆ ನನ್ನ ಬಹುದಿನದ ಕನಸು. ರಾಜ್ಯದಲ್ಲಿ ನೂತನ ತಾಲ್ಲೂಕು ಆಗುವುದಾದರೇ ಮೊದಲು ಹೆಬ್ರಿ ಆಗಲೇಬೇಕು. ನನ್ನ ಅಧಿಕಾರದ ಅವಧಿಯಲ್ಲೇ ತಾಲ್ಲೂಕಿಗೆ ಬೇಕಾದ ಸಕಲ ಆಡಳಿತಾತ್ಮಕ ವ್ಯವಸ್ಥೆಯನ್ನು ಮಾಡಲಾಗಿದೆ. ಶೀಘ್ರವಾಗಿ ಹೆಬ್ರಿ ತಾಲ್ಲೂಕು ರಚಿಸುವಂತೆ ಮುಖ್ಯಮಂತ್ರಿಯ ಗಮನಕ್ಕೆ ತರುವುದಾಗಿ ಸಂಸದ ವೀರಪ್ಪ ಮೊಯಿಲಿ ಭರವಸೆ ನೀಡಿದರು.
 
ಅವರು ಸೋಮವಾರ ಹೆಬ್ರಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಸಭಾಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಹುಲಿ ಯೋಜನೆ ಮತ್ತು ಕಸ್ತೂರಿ ರಂಗನ್ ವರದಿಯ ಅನುಷ್ಠಾನ ಕ್ಕೆ ಬೇಡಿಕೆ ಇಟ್ಟಿದ್ದರೂ ಯುಪಿಎ ಸರ್ಕಾರ ಅನುಮತಿ ನೀಡಿಲ್ಲ. ಈಗ ಬಿಜೆಪಿ ಸರ್ಕಾರ ಹುಲಿ ಯೋಜನೆಯನ್ನು ಅನು ಷ್ಠಾನಕ್ಕೆ ತರುತ್ತಿದ್ದು, ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಕಸ್ತೂರಿ ರಂಗನ್ ವರದಿಯನ್ನು ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡುವುದಿಲ್ಲ ಎಂದು ಕೇಂದ್ರಕ್ಕೆ 3 ವರದಿ ಸಲ್ಲಿಸಿದೆ. ವರದಿ ಜಾರಿ ಆಗುವುದಿಲ್ಲ, ಹಕ್ಕುಪತ್ರ ವಿತರಣೆ, 94ಸಿ, ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವುದಾಗಿ ಹೇಳಿದ ಮೊಯಿಲಿ, ಉಡುಪಿ– ಹೆಬ್ರಿ– ತೀರ್ಥ ಹಳ್ಳಿ ರಾಷ್ಟ್ರೀಯ ಹೆದ್ದಾರಿಯನ್ನು ಶೀಘ್ರ ವಾಗಿ ಅನುಷ್ಠಾನಗೊಳಿಸುವಂತೆ ಕೇಂದ್ರ ಕ್ಕೆ ಒತ್ತಡ ಹೇರುವುದಾಗಿ ತಿಳಿಸಿದರು. 
 
ತಾಲ್ಲೂಕು ಘೋಷಣೆ ಮಾಡಿಸಿ:  ಸಕಲ ಅರ್ಹತೆಯ ಹೆಬ್ರಿ ತಾಲ್ಲೂಕನ್ನು ಘೋಷಣೆ ಮಾಡುವಂತೆ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಅವರು ವೀರಪ್ಪ ಮೊಯಿಲಿ ಅವರಿಗೆ ಮನವಿ ಮಾಡಿ, ಹೆಬ್ರಿ ಮತ್ತು ಕಾರ್ಕಳದಲ್ಲಿ ಸರ್ಕಾರದ ಮೂಲಕ ಹಲವು ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನ ಮಾಡುವಂತೆ ಮನವಿ ಮಾಡಿದರು. 
 
ಹೆಬ್ರಿ ಬ್ಲಾಕ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾ ರಿ, ಹರ್ಷ ಮೊಯಿಲಿ, ಮುನಿಯಾಲು ಉದಯ ಶೆಟ್ಟಿ, ಡಾ.ಸಂತೋಷ ಕುಮಾರ ಶೆಟ್ಟಿ, ಪಕ್ಷದ ಪ್ರಮುಖರಾದ ಬಿಪಿನ್ ಚಂದ್ರಪಾಲ್ ನಕ್ರೆ, ಶೀನಾ ಪೂಜಾರಿ, ರಾಘವ ದೇವಾಡಿಗ, ಜಯ ಕರ ಪೂಜಾರಿ, ಶಶಿಕಲಾ ಪೂಜಾರಿ, ಪ್ರವೀಣ್ ಬಲ್ಲಾಳ್, ಸಂದೀಪ್, ಸಂತೋಷ ಕುಮಾರ ಶೆಟ್ಟಿ, ಭೋಜ ಪೂಜಾರಿ. ಪ್ರಭಾಕರ ಬಂಗೇರ, ಪಕ್ಷದ ವಿವಿಧ ಘಟಕಗಳ ಪ್ರಮುಖರು ಉಪಸ್ಥಿತರಿದ್ದರು. 
 
ಸಂಘದ ಅಧ್ಯಕ್ಷ ಭೋಜ ಪೂಜಾರಿ, ಗೌರವಾಧ್ಯಕ್ಷ ಶೀನಾ ಪೂಜಾರಿ, ಜಯಕರ ಪೂಜಾರಿ ಇದ್ದರು. 
 
‘ಗೋಪಾಲ ಭಂಡಾರಿ ಸಮರ್ಥ ಅಭ್ಯರ್ಥಿ’
ಕಾರ್ಕಳ ಕ್ಷೇತ್ರದಲ್ಲಿ ಪಕ್ಷದ ನಾಯಕರು, ಜಿಲ್ಲಾ ನಾಯಕರು ಯಾರೂ ಗೊಂದಲ ಎಬ್ಬಿಸಬೇಡಿ. ಯಾವುದೇ ಹಂತದ ಲೆಕ್ಕಚಾರಗಳು ಲೆಕ್ಕಕ್ಕೆ ಬರುವುದಿಲ್ಲ. ಕಾರ್ಕಳದ ಕಾಂಗ್ರೆಸ್ ಒಗ್ಗಟ್ಟನ್ನು ಮುರಿಯಬೇಡಿ, ಎಲ್ಲ ವಿಚಾರದಲ್ಲೂ ಹೆಬ್ರಿ ಗೋಪಾಲ ಭಂಡಾರಿಯವರೇ ಕಾರ್ಕಳ ಕ್ಷೇತ್ರದ ಸಮರ್ಥ ಮತ್ತು ಏಕೈಕ ಅಭ್ಯರ್ಥಿ ಎಂದು ಸಂಸದ ವೀರಪ್ಪ ಮೊಯಿಲಿ ಹೆಬ್ರಿಯಲ್ಲಿ ಸೋಮವಾರ ಘೋಷಣೆ ಮಾಡಿ, ಮುಂದಿನ ಕಾರ್ಯತಂತ್ರ ರೂಪಿಸುವಂತೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.