ADVERTISEMENT

ಶಿಕ್ಷಕ–ವಿದ್ಯಾರ್ಥಿ ನಡುವೆ ಉತ್ತಮ ಸಂಬಂಧ ಅಗತ್ಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 8:02 IST
Last Updated 27 ಆಗಸ್ಟ್ 2016, 8:02 IST
ಶಿಕ್ಷಕ–ವಿದ್ಯಾರ್ಥಿ ನಡುವೆ ಉತ್ತಮ ಸಂಬಂಧ ಅಗತ್ಯ
ಶಿಕ್ಷಕ–ವಿದ್ಯಾರ್ಥಿ ನಡುವೆ ಉತ್ತಮ ಸಂಬಂಧ ಅಗತ್ಯ   

ಶಿರಸಿ: ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಉತ್ತಮ ಸಂಬಂಧ ಇರಬೇಕು. ಶಿಕ್ಷಕರು ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡರೆ ಮಾತ್ರ ವಿದ್ಯಾರ್ಥಿ ಉತ್ತಮವಾಗಲು ಸಾಧ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವ ಎಂ.ವಿ. ಜೋಶಿ ಹೇಳಿದರು.

ಇಲ್ಲಿನ ಎಂ.ಎಂ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ವೃತ್ತಿಯನ್ನು ಪ್ರೀತಿಸಿದರೆ ಮಾತ್ರ ಸಭ್ಯತೆ ಮತ್ತು ಧನ್ಯತೆ ಭಾವ ಬರುತ್ತದೆ. ಶಿಕ್ಷಕರಿಗೆ ವೈಯಕ್ತಿಕ ಜೀವನ ಇರಬಾರದು. ಹಾಗಾದಾಗ ಮಾತ್ರ ಯಶಸ್ವಿ ಶಿಕ್ಷಕನಾಗಲು ಸಾಧ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.