ADVERTISEMENT

ಸೋನಾರವಾಡ: ಮಹಿಳಾ ಪೀಡಕನಿಗೆ ಚಪ್ಪಲಿ ಏಟು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 8:31 IST
Last Updated 17 ನವೆಂಬರ್ 2017, 8:31 IST

ಕಾರವಾರ: ಇಲ್ಲಿನ ಸೋನಾರವಾಡದ ಮಹಿಳೆಯೊಬ್ಬರಿಗೆ ಕರೆ ಮಾಡಿ ಪೀಡಿಸುತ್ತಿದ್ದ ನಂದನಗದ್ದಾದ ಪ್ರಶಾಂತ್ ಎಂಬುವನನ್ನು ಸಾರ್ವಜನಿಕರು ಮಂಗಳವಾರ ವಿದ್ಯುತ್ ಕಂಬಕ್ಕೆ ಕಟ್ಟಿ ಚಪ್ಪಲಿ ಏಟು ನೀಡಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸೋನಾರವಾಡದ ಮಹಿಳೆಯೊಬ್ಬರ ಮೊಬೈಲ್‌ಗೆ ಈತ ಪ್ರತಿ ದಿನ ಮಿಸ್ಡ್ ಕಾಲ್ ಹಾಗೂ ಕರೆ ಮಾಡಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಹಿಳೆ ತನ್ನ ಪತಿಗೆ ತಿಳಿಸಿದ್ದರು. ಬಳಿಕ ಉಪಾಯದಿಂದ ಆತನನ್ನು ಸೋನಾರವಾಡಕ್ಕೆ ಬರುವಂತೆ ಮಾಡಿದ್ದರು. ಅಲ್ಲಿಗೆ ಮಂಗಳವಾರ ಬಂದಿದ್ದ ಆತನನ್ನು ಹಿಡಿದು, ರಸ್ತೆಯಲ್ಲಿನ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT