ADVERTISEMENT

ಆಸ್ಪತ್ರೆಗೆ ಸಕಾಲಕ್ಕೆ ಬಾರದ ವೈದ್ಯರು: ದೂರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 9:43 IST
Last Updated 20 ಜುಲೈ 2017, 9:43 IST

ವಿಜಯಪುರ: ‘ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ’ ಎಂದು ಆರೋಪಿಸಿ ಭಾರತೀಯ ಭಾವೈಕ್ಯ ಸಮಿತಿ ಪದಾಧಿಕಾರಿಗಳು, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ದೂರು ಸಲ್ಲಿಸಿದರು.

ಸಮಿತಿ ಸಂಚಾಲಕ ಡಾ.ರವಿ ವಲ್ಲ್ಯಾಪೂರ ಮಾತನಾಡಿ ‘ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಬರುವುದಿಲ್ಲ. ಸರ್ಕಾರ 24X7 ಸೇವೆ ಸಲ್ಲಿಸಬೇಕು ಎಂದು ಆದೇಶಿಸಿದ್ದರೂ, ಪಾಲಿಸುತ್ತಿಲ್ಲ’ ಎಂದು ದೂರಿದರು.

ಕೊಲ್ಹಾರ ಪಟ್ಟಣ ದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಇರುವುದಿಲ್ಲ. ಹಣ ಪಡೆದು ಚಿಕಿತ್ಸೆ ನೀಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಸ್ವಂತ ಕ್ಲಿನಿಕ್ ಕೂಡ ಹೊಂದಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ರಾಜು ಅಹ್ಮದ್‌ ಮುನ್ನಾಬಾಯಿ, ಮೈಬೂಬ್ ಕೂಡಗಿ, ದಸ್ತಗೀರಸಾಬ್ ಅತ್ತಾರ, ಗೈಬು ಕಂಕರಪೀರ, ಮನ್ನೂರ ಕಡ್ಲಿಮಟ್ಟಿ, ಸೈಯದಷಾ ಮಕಾಂದಾರ, ಸದ್ದಾಂ ನದಾಫ್‌, ಡೋಂಗ್ರಿಸಾಬ್ ವಾಲೀಕಾರ, ಹಾಜಿಸಾಬ್ ವಾಲೀಕಾರ, ಬಂದೇನವಾಜ ಮುಲ್ಲಾ, ಮೋಸಿನ ಕತನಹಳ್ಳಿ, ಯಾಸಿನ ಕತನಹಳ್ಳಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.