ADVERTISEMENT

ಬೆಳ್ಳುಳ್ಳಿ ಶೆಡ್‌ಗೆ ಸಿಡಿಲು; ₨ 3 ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 7:01 IST
Last Updated 29 ಏಪ್ರಿಲ್ 2017, 7:01 IST

ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕು ಬ್ಯಾಕೋಡ ಗ್ರಾಮದ ತೋಟ ದಲ್ಲಿನ ಶೆಡ್‌ಗೆ ಶುಕ್ರವಾರ ಸಂಜೆ ಸಿಡಿಲು ಬಡಿದು, ಅದರೊಳಗಿದ್ದ ₹ 3 ಲಕ್ಷ ಮೌಲ್ಯದ ಬೆಳ್ಳುಳ್ಳಿ ಸುಟ್ಟು ಕರಕಲಾಗಿದೆ.ಬ್ಯಾಕೋಡ ಗ್ರಾಮದ ಹಣಮಂತ ರಾಯ ಹರನಾಳ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಿದ್ದರಿಂದ ತೋಟದ ಶೆಡ್‌ನಲ್ಲಿ ಬೆಳ್ಳುಳ್ಳಿ ಸಂಗ್ರಹಿಸಿದ್ದರು.

ಶುಕ್ರವಾರ ಸಂಜೆ ಆನೆಕಲ್ಲು ಸಮೇತ, ಕೆಲಕಾಲ ತುಂತುರು ಮಳೆ ಬಂದು, ಸಿಡಿಲು ಬಡೆದಿದ್ದರಿಂದ ಸೆಡ್‌ನಲ್ಲಿ ಶೇಕರಣೆ ಮಾಡಿಟ್ಟಿದ್ದ ಅಂದಾಜು ₹ 3 ಲಕ್ಷ ಮೌಲ್ಯದ ಬಳ್ಳೂಳ್ಳಿ  ಸಂಪೂರ್ಣ ಸುಟ್ಟು ಕರಕಲಾಗಿದೆ.ಇಂದು ಸಾಯಂಕಾಲ 4.45 ಸುಮಾರಿಗೆ ಸಿಡಿಲು ಬಡೆದು ಸಂಪೂರ್ಣ ಸುಟ್ಟು ಕರಕಲಾಗಿದೆ, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲ ಎಂದು ತೋಟದಲ್ಲಿ ಶೇಖರಣೆ ಮಾಡಿ  ಬಳ್ಳೂಳ್ಳಿ ಇಡಲಾಗಿತ್ತು, ನಂತರ ಸುದ್ದಿ ತಿಳಿದ ಕೂಡಲೇ ಗ್ರಾಮಸ್ಥರು ತೋಟಕ್ಕೆ ಹೋಗಿ ಬೆಂಕಿಯನ್ನು ನಂದಿಸಿದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT