ADVERTISEMENT

ರಸ್ತೆಯಲ್ಲಿ ಬ್ಯಾನರ್: ಖಂಡನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 6:54 IST
Last Updated 13 ಮಾರ್ಚ್ 2017, 6:54 IST
ಸಿಂದಗಿಯಲ್ಲಿ ಅಕ್ಕನ ದರ್ಶನ ಪ್ರವಚನ ವೇದಿಕೆಯಲ್ಲಿ ಕಟ್ಟಲಾದ ಸಿಂದಗಿ ಪಟ್ಟಾಧ್ಯಕ್ಷರ ಭಾವಚಿತ್ರ, ಹೆಸರಿನ ಬ್ಯಾನರ್ಅನ್ನು ಕಟ್ಟಲಾಗಿದೆ.
ಸಿಂದಗಿಯಲ್ಲಿ ಅಕ್ಕನ ದರ್ಶನ ಪ್ರವಚನ ವೇದಿಕೆಯಲ್ಲಿ ಕಟ್ಟಲಾದ ಸಿಂದಗಿ ಪಟ್ಟಾಧ್ಯಕ್ಷರ ಭಾವಚಿತ್ರ, ಹೆಸರಿನ ಬ್ಯಾನರ್ಅನ್ನು ಕಟ್ಟಲಾಗಿದೆ.   

ಸಿಂದಗಿ: ಶಾಂತವೀರ ಪಟ್ಟಾಧ್ಯಕ್ಷರ ಭಾವಚಿತ್ರದೊಂದಿಗೆ ಹೆಸರುಳ್ಳ ಬ್ಯಾನರ್ ನಗರದ ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಅಕ್ಕನ ದರ್ಶನ ಪ್ರವಚನ ವೇದಿಕೆಯಲ್ಲಿತ್ತು. ಅದನ್ನು ಒಂದೇ ದಿನದಲ್ಲಿ ಕಿತ್ತು ತಂದು ಹೊರಗಡೆ ರಸ್ತೆಯಲ್ಲಿ ಕಟ್ಟಲಾಗಿರುವುದು ಶ್ರೀಗಳಿಗೆ ಮಾಡಿದ ಅವಮಾನ ಎಂದು ಶ್ರೀಗಳ ಭಕ್ತರು ಖಂಡಿಸಿದ್ದಾರೆ.

ಈ ಪ್ರಮಾದಕ್ಕೆ ಕ್ಷಮೆಯಾಚಿಸಿ ಕೂಡಲೇ ಅದೇ ಬ್ಯಾನರ್ ಅನ್ನು ವೇದಿಕೆಯಲ್ಲಿ ಕಟ್ಟಬೇಕು. ಪ್ರವಚನ ಸಮಿತಿಯೇ ಈ ಪ್ರಮಾದಕ್ಕೆ ಹೊಣೆ ಗಾರರು. ಇದನ್ನು ದುರುದ್ದೇಶ ಪೂರ್ವಕವಾಗಿ ಮಾಡ ಲಾಗಿದ್ದು, ಈ ಕೆಲಸ ಯಾರು ಮಾಡಿಸಿದ್ದಾರೆ ಎಂಬುದನ್ನು ಸಮಿತಿ ಬಹಿರಂಗ ಪಡಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಈ ಘಟನೆಯನ್ನು ತಾಲ್ಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘ, ವಿವಿಧ ಮಠಗಳ ಸ್ವಾಮೀಜಿಗಳು ಕೂಡ ಖಂಡಿಸಿದ್ದಾರೆ.

ADVERTISEMENT

ಈ ಪ್ರಮಾದವನ್ನು ಪ್ರವಚನ ಸಮಿತಿ ತಕ್ಷಣವೇ ಸರಿಪಡಿಸಿಕೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಭಕ್ತರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.