ADVERTISEMENT

ಪತ್ರಕರ್ತರಿಗೆ ಸಂಸದ ಜೋಶಿ ಉಡುಗೊರೆ!

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 19:30 IST
Last Updated 24 ಮಾರ್ಚ್ 2014, 19:30 IST
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷದ ರಾಜ್ಯ ಅಧ್ಯಕ್ಷ ಪ್ರಹ್ಲಾದ ಜೋಶಿ ಸೋಮವಾರ ಧಾರವಾಡದ ಪತ್ರಕರ್ತರಿಗೆ ತಲುಪಿಸಿದ ಬಟ್ಟೆಗಳು ಹಾಗೂ ಟೈಟನ್‌ ಕಂಪೆನಿಯ ವಾಚ್‌	–ಪ್ರಜಾವಾಣಿ ಚಿತ್ರ
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷದ ರಾಜ್ಯ ಅಧ್ಯಕ್ಷ ಪ್ರಹ್ಲಾದ ಜೋಶಿ ಸೋಮವಾರ ಧಾರವಾಡದ ಪತ್ರಕರ್ತರಿಗೆ ತಲುಪಿಸಿದ ಬಟ್ಟೆಗಳು ಹಾಗೂ ಟೈಟನ್‌ ಕಂಪೆನಿಯ ವಾಚ್‌ –ಪ್ರಜಾವಾಣಿ ಚಿತ್ರ   

ಧಾರವಾಡ: ಸೋಮವಾರವಷ್ಟೇ ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಚುನಾವಣೆ ಸಂದರ್ಭದಲ್ಲಿ ತಮ್ಮ ಬಗ್ಗೆ ‘ಮೃದು ಧೋರಣೆ’ ತಾಳುವಂತೆ ಮಾಧ್ಯಮದವರನ್ನು ಓಲೈಸಲು ತಮ್ಮ ನೆಚ್ಚಿನ ಬಂಟ ಈರೇಶ ಅಂಚಟಗೇರಿ ಮೂಲಕ ಪತ್ರಕರ್ತರಿಗೆ ಉಡುಗೊರೆ­ಗಳನ್ನು ತಲುಪಿಸಿದರು.

ಸಂಜೆ ಧಾರವಾಡದ ವಿವಿಧ ಮಾಧ್ಯಮ ಸಂಸ್ಥೆಗಳ ಕಚೇರಿಗೆ ತೆರಳಿದ ಪಕ್ಷದ ಮುಖಂಡರಿಬ್ಬರು ಸುಮಾರು
ರೂ. 2,000 ಮೌಲ್ಯದ ಒಂದು ‘ಟೈಟನ್’ ಕಂಪೆನಿಯ ವಾಚ್ ಹಾಗೂ ಅಂದಾಜು ರೂ. 2,000 ಬೆಲೆ ಬಾಳುವ ‘ಸಿಯಾ­ರಾಮ್ಸ್‌ ಮಿನಿಯೇಚರ್‌’ ಕಂಪೆನಿಯ ಶರ್ಟ್ ಹಾಗೂ ಪ್ಯಾಂಟ್ ಪೀಸ್ ಇರುವ ಬ್ಯಾಗ್ ಕೊಟ್ಟರು.

‘ಪ್ರಜಾವಾಣಿ’ ಪ್ರತಿನಿಧಿ ಈ ಉಡುಗೊರೆಗಳನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ, ‘ಧಾರವಾಡದ ಎಲ್ಲ ಪತ್ರಕರ್ತರಿಗೂ ಈ ಗಿಫ್ಟ್‌ ತಲುಪಿಸುವಂತೆ ಜೋಶಿ ಸಾಹೇಬರು ಹೇಳಿದ್ದಾರೆ. ನೀವು ತೆಗೆದುಕೊಳ್ಳದಿದ್ದರೆ ಅವರು ನನಗೆ ಬಯ್ಯುತ್ತಾರೆ’ ಎಂದು ಹೇಳುತ್ತಾ ಕೊಡಲು ಮುಂದಾದರು.

ಆದರೆ ‘ಪ್ರಜಾವಾಣಿ’ ಪ್ರತಿನಿಧಿ ಮನೋಜ್‌ಕುಮಾರ್‌ ಗುದ್ದಿ ಅವುಗಳನ್ನು ಪಡೆಯದೇ ವಾಪಸ್‌ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.