ADVERTISEMENT

‘ವಿನಾಯಕ ಬಾಳಿಗಾರನ್ನು ಕೊಲೆ ಮಾಡಿದ, ಕೊಲೆಗೆ ಬೆಂಬಲಿಸುವವರಿಗೆ ಪ್ರವೇಶವಿಲ್ಲ, ಮತ ಯಾಚನೆಗೆ ಬರಬೇಡಿ’

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 12:42 IST
Last Updated 29 ಏಪ್ರಿಲ್ 2018, 12:42 IST
‘ವಿನಾಯಕ ಬಾಳಿಗಾರನ್ನು ಕೊಲೆ ಮಾಡಿದ, ಕೊಲೆಗೆ ಬೆಂಬಲಿಸುವವರಿಗೆ ಪ್ರವೇಶವಿಲ್ಲ, ಮತ ಯಾಚನೆಗೆ ಬರಬೇಡಿ’
‘ವಿನಾಯಕ ಬಾಳಿಗಾರನ್ನು ಕೊಲೆ ಮಾಡಿದ, ಕೊಲೆಗೆ ಬೆಂಬಲಿಸುವವರಿಗೆ ಪ್ರವೇಶವಿಲ್ಲ, ಮತ ಯಾಚನೆಗೆ ಬರಬೇಡಿ’   

ಮಂಗಳೂರು: ‘ಇದು 2016ರ ಮಾರ್ಚ್‌ 21ರಂದು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾರಿಗೆ ನ್ಯಾಯ ಕೇಳುವವರ ಮನೆ. ಇಲ್ಲಿ ಅವರನ್ನು ಕೊಲೆ ಮಾಡಿದ, ಕೊಲೆಗಾರರನ್ನು ಬೆಂಬಲಿಸುವವರಿಗೆ ಪ್ರವೇಶವಿಲ್ಲ. ಇಂತಹವರು ಯಾರೂ ಇಲ್ಲಿ ಮತ ಯಾಚನೆಗೆ ಬರಬೇಡಿ' ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.

ಕೊಲೆಗೀಡಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗ ಅವರ ಕುಟುಂಬ ಮನೆಯ ಎದುರು ಇಂತಹ ಬ್ಯಾನರ್ ಪ್ರಕಟಿಸಿದೆ.

ವಿನಾಯಕ ಬಾಳಿಗ ಕೊಲೆ ಮಾಡಿದವರಿಗೆ ಶಿಕ್ಷೆ ಕೊಡಿಸುವಂತೆ ಆಗ್ರಹಿಸುತ್ತಿರುವ ಹಲವರು ತಮ್ಮ ಮನೆಯ ಮುಂದೆ ಇಂತಹ ಬ್ಯಾನರ್ ಹಾಕಿದ್ದಾರೆ.

ADVERTISEMENT

ವಿಚಾರವಾದಿಗಳ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.