ADVERTISEMENT

ಈ ವಾರ ತೆರೆಗೆ

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST
‘ಬಂಗಾರ s/o ಬಂಗಾರದ ಮನುಷ್ಯ’
ಶಿವರಾಜ್‍ ಕುಮಾರ್ ನಾಯಕರಾಗಿ ನಟಿಸಿರುವ, ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸಿರುವ ‘ಬಂಗಾರ s/o ಬಂಗಾರದ ಮನುಷ್ಯ’ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಯೋಗಿ ಜಿ.ರಾಜ್ ನಿರ್ದೇಶಿಸಿದ್ದಾರೆ. ಇಟಲಿ, ಸ್ವಿಜರ್‌ಲ್ಯಾಂಡ್, ಬೆಂಗಳೂರು, ಕನಕಪುರ, ಮೈಸೂರು ಸೇರಿದಂತೆ ಹಲವೆಡೆ ಇದರ ಚಿತ್ರೀಕರಣ ನಡೆದಿದೆ.
 
ವಿ.ಹರಿಕೃಷ್ಣ ಸಂಗೀತ, ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ. ವಿದ್ಯಾ ಪ್ರದೀಪ್, ವಿಶಾಲ್ ಹೆಗ್ಡೆ, ಚಿಕ್ಕಣ್ಣ, ಸಾಧು ಕೋಕಿಲ, ಶ್ರೀನಿವಾಸಮೂರ್ತಿ, ಶಿವರಾಮಣ್ಣ, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಗಣದಲ್ಲಿದ್ದಾರೆ.
 
ಬಣ್ಣ ಬಣ್ಣದ ಬದುಕು
ಕಾರ್ಕಳ ಕೃಷ್ಣ ನಾಯಕ್, ಮಾಸ್ಟರ್ ಗೌತಮ್, ಮಾಸ್ಟರ್ ಗಗನ್ ನಿರ್ಮಿಸುತ್ತಿರುವ ‘ಬಣ್ಣ ಬಣ್ಣ ಬದುಕು’ ಈ ವಾರ ಬಿಡುಗಡೆಯಾಗುತ್ತಿದೆ. ಕರಾವಳಿ ಕರ್ನಾಟಕದ ಬಡ ಯಕ್ಷಗಾನ ಕಲಾವಿದನೊಬ್ಬನ ಕಥೆಯನ್ನು ಇದು ಹೊಂದಿದೆ.

ಪತ್ರಕರ್ತ ಇಸ್ಮಾಯಿಲ್ ಮೂಡುಶೆಡ್ಡೆ ಇದರ ನಿರ್ದೇಶಕ. ಎಸ್. ವಿಜಯ್ ಛಾಯಾಗ್ರಹಣ, ಎ.ಕೆ. ವಿಜಯ್ ಕೋಕಿಲ ಸಂಗೀತ ಈ ಚಿತ್ರಕ್ಕಿದೆ. ರವಿರಾಜ್ ಶೆಟ್ಟಿ, ಅನ್ವಿತಾ ಸಾಗರ್, ರಿಯಾ ಮೇಘನಾ, ಸತ್ಯಜಿತ್, ರಮೇಶ್ ಭಟ್ ಮತ್ತಿತರರು ತಾರಾಗಬಳಗದಲ್ಲಿ ಇದ್ದಾರೆ.
 
‘ಕರಾಲಿ +’
ಈ ಚಿತ್ರದ ನಿರ್ದೇಶಕ ದಕ್ಷಿಣಾಮೂರ್ತಿ. ಚಿತ್ರದ ನಾಯಕಿ ವೈಧ್ಯಕಿಯ ವಿದ್ಯಾರ್ಥಿನಿ. ‘ಕರಾಲಿ +’ ಒಂದು ನಿಗೂಢ ವಿಚಾರವನ್ನು ಹೊತ್ತು ಕ್ಷಣ ಕ್ಷಣಕ್ಕೂ ಥ್ರಿಲ್ ನೀಡುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದರಲ್ಲಿ ಒಂದು ಹೆಣ್ಣು ಬೊಂಬೆ ಸಹ ಮುಖ್ಯ ಪಾತ್ರ ವಹಿಸುತ್ತಿದೆ.

ಕಳೆದುಹೋದ ಪ್ರೀತಿಯನ್ನು ಪಡೆಯಲು ಹೆಣ್ಣೊಬ್ಬಳು ತೆಗೆದುಕೊಳ್ಳುವ ನಿರ್ಧಾರ ಚಿತ್ರದಲ್ಲಿದೆ. ಇದರಲ್ಲಿ ಎರಡು ಹಾಡುಗಳು ಇವೆ. ಸಾಹಿಲ್ ರೈ ಚಿತ್ರದ ನಾಯಕ. ಆರ್ಯಮಾನ್ ಸಂಗೀತ, ಪವನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.