ನಾಗೇಂದ್ರ ಅರಸ್ ನಿರ್ದೇಶನ, ಕೆ. ಸುಧಾಕರ್ ನಿರ್ಮಾಣದ ಚಿತ್ರ ‘ವರ್ಧನ’. ಹರ್ಷ, ನೇಹಾ ಪಾಟೀಲ್, ಚಿಕ್ಕಣ್ಣ, ಪದ್ಮಜಾ ರಾವ್, ಶೋಭರಾಜ್, ಪೆಟ್ರೋಲ್ ಪ್ರಸನ್ನ ನಟಿಸಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತವಿದೆ.
*
ಶ್ರೀನಿವಾಸ ಕಲ್ಯಾಣ
ಎಂ.ಜಿ. ಶ್ರೀನಿವಾಸ್ ನಟಿಸಿ, ನಿರ್ದೇಶಿಸಿದ ಚಿತ್ರವಿದು. ಕವಿತಾ, ನಿಖಿಲಾ ರಾವ್ ನಾಯಕಿಯರು. ಮಿಥುನ್ ಮುಕುಂದನ್ ಮತ್ತು ರಘು ಥಾಣೆ ಸಂಗೀತ, ಅಶ್ವಿನ್ ಕಡಂಬೂರ್ ಛಾಯಾಗ್ರಹಣ ಇದೆ. ಚಿತ್ರವನ್ನು ಭರತ್ ಜೈನ್ ನಿರ್ಮಿಸಿದ್ದಾರೆ.
*
ಪ್ರೀತಿ ಪ್ರೇಮ
ಶ್ರೀ ಕೃಷ್ಣ ಚೈತನ್ಯ ನಿರ್ಮಾಣದ ‘ಪ್ರೀತಿ ಪ್ರೇಮ’ ಚಿತ್ರವನ್ನು ನಿರ್ಮಿಸಿದ್ದಾರೆ. ಕಾಶಿ ಚಿತ್ರದ ನಿರ್ದೇಶಕ. ಕೃಷ್ಣ ಅವರೇ ನಾಯಕ ನಟರಾಗಿದ್ದು, ನಿಧಿ ಕುಶಾಲಪ್ಪ ನಾಯಕಿ. ಬಿ.ಜೆ ಭರತ್ ಸಂಗೀತ, ರವಿಕುಮಾರ್ ಛಾಯಾಗ್ರಹಣವಿದೆ. ಗಿರಿ, ಟೆನ್ನಿಸ್ ಕೃಷ್ಣ, ಗಿರೀಶ್ ವೈದ್ಯನಾಥನ್ ಇತರರು ನಟಿಸಿದ್ದಾರೆ.
*
ಮನಮಂಥನ
ಸುರೇಶ್ ಹೆಬ್ಳಿಕರ್ ನಿರ್ದೇಶನದ ‘ಮನ ಮಂಥನ’ ತೆರೆಗೆ ಬರುತ್ತಿದೆ. ಡಾ. ಅಶೋಕ್ ಪೈ ಚಿತ್ರದ ನಿರ್ಮಾಪಕರು. ಪಿ. ರಾಜನ್ ಛಾಯಾಗ್ರಹಣ, ಪ್ರವೀಣ್ ಡಿ. ರಾವ್ ಸಂಗೀತವಿದೆ. ಚಿತ್ರದ ಮುಖ್ಯ ಪಾತ್ರದಲ್ಲಿರುವ ರಮೇಶ್ ಭಟ್ ನಟನೆಗೆ 2015–16ನೇ ಸಾಲಿನ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.