ಆಧಾತ್ಮಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತನ್ನಲ್ಲಿ ಮೇಳೈಸಿಕೊಂಡಿರುವ ಬೆಂಗಳೂರಿನಲ್ಲಿ ನೆಲೆಸಿರುವುದು ನನಗೆ ಖುಷಿ ಕೊಡುವ ಸಂಗತಿ. ದಕ್ಷಿಣ ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿ ಹಲವು ಪುರಾತನ ದೇಗುಲಗಳಿವೆ. ಈ ದೇಗುಲಗಳ ವಾಸ್ತುಶಿಲ್ಪ ಎಲ್ಲರ ಗಮನ ಸೆಳೆಯುವಂತಿದೆ. ಇತಿಹಾಸದ ಪುಟಗಳು ಬೆಂಗಳೂರಿನ ಕಥೆ ಹೇಳುತ್ತವೆ.
ಬೆಂಗಳೂರಿನ ಹಳೆಯ ಬಡಾವಣೆಗಳಲ್ಲಿ ಇಂದಿಗೂ ಜಾತ್ರೆ ಮತ್ತು ಉತ್ಸವಗಳು ವೈಭವದಿಂದ ನಡೆಯುತ್ತವೆ. ಇಂಥ ಹೆಮ್ಮೆಯ ಕರ್ನಾಟಕದ ರಾಜಧಾನಿಯಲ್ಲಿ ನಾನಿದ್ದೇನೆ ಎನ್ನುವುದೇ ದೊಡ್ಡ ಸಂಭ್ರಮ.
–ಮನೋಹರ ಜೋಶಿ,
ವಿದ್ಯಾಪೀಠ ವೃತ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.