ADVERTISEMENT

ರಂಗಾಂತರಂಗ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST

ನಗರದಲ್ಲಿ 36 ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ‘ಅಂತರಂಗ’ ತಂಡ ಈ ಬಾರಿ ಮೂರು ದಿನಗಳ ನಾಟಕೋತ್ಸವವನ್ನು ಆಯೋಜಿಸಿದೆ. ಸೋಮವಾರದಿಂದ ಬುಧವಾರದವರೆಗೆ ಮಲ್ಲೇಶ್ವರದ ಸೇವಾಸದನದಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಸೋಮವಾರ (ನ.20): ಸಂಜೆ 6.30ಕ್ಕೆ ಉದ್ಘಾಟನೆ. ಅತಿಥಿಗಳು– ವಿಮಲಾ ರಂಗಾಚಾರ್‌, ವೆಂಕಟಸುಬ್ಬಯ್ಯ, ಬಾಬು ಹಿರಣ್ಣಯ್ಯ. ಸನ್ಮಾನ– ಶ್ರೀನಿವಾಸ ಜಿ. ಕಪ್ಪಣ್ಣ. ನಾಟಕ– ‘ಶಾಲಭಂಜಿಕೆ’. ಕಥೆ– ಕೆ.ಎನ್‌. ಗಣೇಶಯ್ಯ. ರಂಗರೂಪ– ಎಸ್‌.ಆರ್‌. ಗಿರೀಶ್‌. ವಿನ್ಯಾಸ– ನಿರ್ದೇಶನ– ಅರ್ಚನಾ ಶ್ಯಾಮ್‌. ತಂಡ– ಅಂತರಂಗ.

ಮಂಗಳವಾರ (ನ.21): ಸಂಜೆ 6.30ಕ್ಕೆ ‘ವಿಗಡ ವಿಕ್ರಮರಾಯ’ ನಾಟಕ. ರಚನೆ– ಸಂಸ. ನಿರ್ದೇಶನ– ಎಸ್‌.ವಿ. ಕಶ್ಯಪ್‌. ತಂಡ– ವಿಜಯನಗರ ಬಿಂಬ.

ADVERTISEMENT

ಬುಧವಾರ (ನ.22): ಸಂಜೆ 6.30ಕ್ಕೆ ಸಮಾರೋಪ ಸಮಾರಂಭ. ಅತಿಥಿಗಳು– ಜೆ.ಲೋಕೇಶ್‌. ಭಾರ್ಗವಿ ನಾರಾಯಣ್‌. ಸನ್ಮಾನ– ಎನ್‌.ಕೆ. ರಾಮಕೃಷ್ಣ. ರಂಗ ಗುರುಗಳಿಗೆ ಕೃತಜ್ಞತೆ– ಬಿ.ವಿ. ರಾಜಾರಂ. ‘ಮಾರಿ ಕಾಡು’ ನಾಟಕ ಪ್ರದರ್ಶನ. ಮೂಲ– ಶೇಕ್ಸ್‌ಪಿಯರ್‌. ಕನ್ನಡಕ್ಕೆ– ಚಂದ್ರಶೇಖರ ಕಂಬಾರ. ಸಂಗೀತ– ಶ್ರೀಪಾದ್‌ ಭಟ್‌, ನಿರ್ದೇಶನ– ಮೇಘ ಸಮೀರ. ತಂಡ– ನಟನ ರಂಗಶಾಲೆ.

ಸ್ಥಳ– ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.