ADVERTISEMENT

ರಾಷ್ಟ್ರೋತ್ಥಾನ ಪರಿಷತ್‌ನಿಂದ ಅಂಬೇಡ್ಕರ್ ಜಯಂತಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 19:30 IST
Last Updated 18 ಏಪ್ರಿಲ್ 2017, 19:30 IST
ರಾಷ್ಟ್ರೋತ್ಥಾನ ಪರಿಷತ್ ಈಚೆಗೆ ನಗರದಲ್ಲಿ ಅಂಬೇಡ್ಕರ್್ ಜಯಂತಿ ಆಚರಿಸಿತು
ರಾಷ್ಟ್ರೋತ್ಥಾನ ಪರಿಷತ್ ಈಚೆಗೆ ನಗರದಲ್ಲಿ ಅಂಬೇಡ್ಕರ್್ ಜಯಂತಿ ಆಚರಿಸಿತು   

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ನಿಮಿತ್ತ ರಾಷ್ಟ್ರೋತ್ಥಾನ ಪರಿಷತ್  ಜಾಗರಣ ಪ್ರಕಲ್ಪ, ನಗರದ ವಿವಿಧ ಕೊಳೆಗೇರಿಗಳಲ್ಲಿ ಸ್ವಚ್ಛ ಭಾರತ ಅಭಿಯಾನ ನಡೆಸಿತು.

ಕೆಂಪೇಗೌಡನಗರದ ಸನ್ಯಾಸಿಕುಂಟೆ, ರಾಯಪುರಂ ವಾರ್ಡ್‌ನ ಜಗಜೀವನ ರಾಂನಗರ, ನಾಯಂಡಹಳ್ಳಿಯ ಪಂತರಪಾಳ್ಯ, ಬನಶಂಕರಿ ದೇವಸ್ಥಾನದ ಬಳಿಯ ಅಂಬೇಡ್ಕರ್ ನಗರ, ಮಾಗಡಿ ರಸ್ತೆಯ ಗೋಪಾಲಪುರ ಕೊಳೆಗೇರಿಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮಾಜಸೇವಕ ಕೇಶವ, ಜಯ ಕರ್ನಾಟಕ ಸಂಘಟನೆಯ ಮುನಿಯಪ್ಪ, ರಾಷ್ಟ್ರೋತ್ಥಾನ ಜಾಗರಣ ಪ್ರಕಲ್ಪದ ಪ್ರಮುಖ ವೀರೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.