ADVERTISEMENT

ಕಾಶ್ಮೀರದಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದು ಕಾಂಗ್ರೆಸ್ ಮುಖಂಡ ಅಲ್ಲ ಬಿಜೆಪಿ ಕಾರ್ಯಕರ್ತ?

ಏಜೆನ್ಸೀಸ್
Published 25 ಏಪ್ರಿಲ್ 2018, 14:58 IST
Last Updated 25 ಏಪ್ರಿಲ್ 2018, 14:58 IST
ಗುಲಾಂ ನಬಿ ಪಟೇಲ್ ಸಂಚರಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆದಿತ್ತು  (ಕೃಪೆ: ಟ್ವಿಟರ್)
ಗುಲಾಂ ನಬಿ ಪಟೇಲ್ ಸಂಚರಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆದಿತ್ತು (ಕೃಪೆ: ಟ್ವಿಟರ್)   

ಶ್ರೀನಗರ: ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಉಗ್ರರು ನಡೆಸಿದ ಗುಂಡಿನ ದಾಳಿಗೆ ಕಾಂಗ್ರೆಸ್ ಮಾಜಿ ಮುಖಂಡ ಗುಲಾಂ ನಬಿ ಪಟೇಲ್‌ ಬಲಿಯಾಗಿದ್ದಾರೆ.

ಗುಲಾಂ ನಬಿ ಪಟೇಲ್‌ ಅವರು ಕಳೆದ ವರ್ಷ ಪುಲ್ವಾಮಾ ಜಿಲ್ಲೆಯ ಪಿಡಿ‍ಪಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸ್ಕಾರ್ಪಿಯೊ ವಾಹನದಲ್ಲಿ ತೆರಳುತ್ತಿದ್ದ ಅವರನ್ನು ಇಲ್ಲಿನ ರಜೌರಿ ಚೌಕದಲ್ಲಿ ಅಡ್ಡಗಟ್ಟಿದ ಉಗ್ರರು ಗುಂಡಿನ ದಾಳಿ ನಡೆಸಿದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಅವರು ಸಾವನ್ನಪ್ಪಿದ್ದಾರೆ’ ಎಂದು ‍ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT