ADVERTISEMENT

ಕೃಪಾಂಕ ರದ್ದು: ರಾಜ್ಯಗಳ ವಿವೇಚನೆಗೆ

ಪಿಟಿಐ
Published 25 ಏಪ್ರಿಲ್ 2017, 19:56 IST
Last Updated 25 ಏಪ್ರಿಲ್ 2017, 19:56 IST
ಕೃಪಾಂಕ  ರದ್ದು: ರಾಜ್ಯಗಳ ವಿವೇಚನೆಗೆ
ಕೃಪಾಂಕ ರದ್ದು: ರಾಜ್ಯಗಳ ವಿವೇಚನೆಗೆ   

ನವದೆಹಲಿ: ಪರೀಕ್ಷೆಗಳಲ್ಲಿ ಕಠಿಣ ಪ್ರಶ್ನೆಗಳಿಗೆ ಕೃಪಾಂಕ ನೀಡುವ ಪದ್ಧತಿ ರದ್ದುಪಡಿಸುವ ಬಗ್ಗೆ ಆಯಾ ರಾಜ್ಯಗಳ ಶಿಕ್ಷಣ ಮಂಡಳಿಗಳೇ ನಿರ್ಧಾರ ಕೈಗೊಳ್ಳಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸೋಮವಾರ ಕಠಿಣ ಪ್ರಶ್ನೆಗಳಿಗೆ  ಕೃಪಾಂಕ ನೀಡುವ ಪದ್ಧತಿ ರದ್ದುಪಡಿಸಿ  ಮಹತ್ವದ ನಿರ್ಣಯ ಕೈಗೊಂಡಿತ್ತು. ಆದರೆ, ವಿದ್ಯಾರ್ಥಿಗಳು ತೇರ್ಗಡೆಯಾಗಲು ಕೆಲವೇ ಅಂಕಗಳು ಅಗತ್ಯವಿದ್ದರೆ ಕೃಪಾಂಕ ನೀಡುವ ಪದ್ಧತಿಯನ್ನು ಮುಂದುವರಿಸಲು ನಿರ್ಧರಿಸಿತ್ತು.

ಈ ಬಗ್ಗೆ ಜಾವಡೇಕರ್‌ ಅವರು ಪ್ರತಿಕ್ರಿಯಿಸಿ, ‘ಇದು ಉತ್ತಮ ನಿರ್ಧಾರ. ಆದರೆ, ಅಂತಿಮ ನಿರ್ಣಯವನ್ನು ರಾಜ್ಯಗಳೇ ಕೈಗೊಳ್ಳಲಿವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.