ADVERTISEMENT

ಡಿಎಂಕೆ ಮುಖಂಡ ಕರುಣಾನಿಧಿ 92ನೇ ಹುಟ್ಟುಹಬ್ಬ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ಚೆನೈ(ಪಿಟಿಐ): ಡಿಎಂಕೆ  ಹಿರಿಯ ಮುಖಂಡ ಎಂ ಕರುಣಾನಿಧಿ ಅವರ 92ನೇ ಹುಟ್ಟುಹಬ್ಬವನ್ನು 92ಕೆಜಿ ತೂಕದ ಕೇಕ್‌ ಕತ್ತರಿಸಿ, ಪಾರಿವಾಳ ಹಾರಿಸುವ ಮೂಲಕ ಪಕ್ಷದ ಕಾರ್ಯಕರ್ತರೊಂದಿಗೆ ಆಚರಿಸಿದರು.

ಕರುಣಾನಿಧಿ ಅವರು ಡಿಎಂಕೆ ಸ್ಥಾಪಕ ಸಿ.ಎನ್‌ ಅಣ್ಣಾದೊರೈ  ಹಾಗೂ ಮತ್ತೊಬ್ಬ ನಾಯಕ ವಿ. ರಾಮಸ್ವಾಮಿ ಪೆರಿಯಾರ್ ಅವರ ಸಮಾಧಿ ಸ್ಥಳಕ್ಕೆ ತೆರಳಿ  ಪುಷ್ಪನಮನ ಸಲ್ಲಿಸಿದರು.

ಐದು ಬಾರಿ ಮುಖ್ಯಮಂತ್ರಿಯಾಗಿದ್ದ  ನಂತರ, ಪಕ್ಷದ ಪ್ರಧಾನ ಕಚೇರಿಯಲ್ಲಿ ಡಿಎಂಕೆ ಕಾರ್ಯಕರ್ತರು ಭೇಟಿ ಮಾಡಿ ಶುಭಕೋರಿದರು.
ಪಕ್ಷದ ಕಾರ್ಯಕರ್ತರು  ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.