ADVERTISEMENT

ತರುಣ್ ವಿಜಯ್ ಅವರು ಬಿಜೆಪಿ,ಆರ್‍‌ಎಸ್‍ಎಸ್‍ನವರು ಮಾತ್ರ ಭಾರತೀಯರು ಎಂದು ಅಂದುಕೊಂಡಿದ್ದಾರೆಯೇ?

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2017, 10:04 IST
Last Updated 8 ಏಪ್ರಿಲ್ 2017, 10:04 IST
ತರುಣ್ ವಿಜಯ್ ಅವರು ಬಿಜೆಪಿ,ಆರ್‍‌ಎಸ್‍ಎಸ್‍ನವರು ಮಾತ್ರ ಭಾರತೀಯರು ಎಂದು ಅಂದುಕೊಂಡಿದ್ದಾರೆಯೇ?
ತರುಣ್ ವಿಜಯ್ ಅವರು ಬಿಜೆಪಿ,ಆರ್‍‌ಎಸ್‍ಎಸ್‍ನವರು ಮಾತ್ರ ಭಾರತೀಯರು ಎಂದು ಅಂದುಕೊಂಡಿದ್ದಾರೆಯೇ?   

ನವದೆಹಲಿ: ಬಿಜೆಪಿ ಮತ್ತು ಆರ್‍ಎಸ್‍ಎಸ್‍ನವರು ಮಾತ್ರ ಭಾರತೀಯರೇ? ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ಬಿಜೆಪಿ ಮುಖಂಡ ತರುಣ್ ವಿಜಯ್ ಅವರನ್ನು ಪ್ರಶ್ನಿಸಿದ್ದಾರೆ.

ದಕ್ಷಿಣ ಭಾರತೀಯರು ಕಪ್ಪು, ಅವರೊಂದಿಗೆ ನಾವು ಬದುಕುತ್ತಿಲ್ಲವೇ? ಎಂಬ ತರುಣ್ ವಿಜಯ್ ಅವರ ವಿವಾದಿತ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಚಿದಂಬರಂ, ನಾವು ಕಪ್ಪು ಜನರೊಂದಿಗೆ ಬದುಕುತ್ತೇವೆ ಎಂಬ ವಾಕ್ಯದಲ್ಲಿ ನಾವು ಎಂದರೆ ಯಾರು ಎಂದು ಕೇಳಿದ್ದಾರೆ.

[related]

ADVERTISEMENT

ನಾವು ಎಂದರೆ ಬಿಜೆಪಿ ಮತ್ತು ಆರ್‍ಎಸ್‍ಎಸ್‍ನ ಸದಸ್ಯರೇ?  ಬಿಜೆಪಿ, ಆರ್‍‌ಎಸ್‍ಎಸ್‍ನವರು ಮಾತ್ರ ಭಾರತೀಯರು ಎಂದು ತರುಣ್ ಹೇಳುತ್ತಿದ್ದಾರೆಯೇ? ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.