ADVERTISEMENT

ನನ್ನ ಮಗ ಮುಗ್ಧ: ಕುಂತಿದೇವಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2014, 19:30 IST
Last Updated 11 ಸೆಪ್ಟೆಂಬರ್ 2014, 19:30 IST

ಗಾಜಿಯಾಬಾದ್‌ (ಐಎಎನ್‌ಎಸ್‌): ‘ನನ್ನ ಮಗ ಮುಗ್ಧ. ಈ ಕೊಲೆಗಳಿಗೆ ಅವನನ್ನು ಮನೆಗೆಲಸಕ್ಕೆ ಇರಿಸಿಕೊಂಡಿದ್ದ ಮೋನಿಂದರ್‌ ಸಿಂಗ್‌  ಪಂಧೇರ್‌ ಕಾರಣ’ ಎಂದು ನಿಥಾರಿ ಸರಣಿ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಸುರಿಂದರ್‌ ಕೋಲಿಯ ತಾಯಿ ಕುಂತಿದೇವಿ ಆಪಾದಿಸಿದರು.

ಮೀರಠ್‌ ಜೈಲಿನಲ್ಲಿರುವ ಕೋಲಿಯನ್ನು  ಗುರುವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಕೊಲೆಗಳಿಗೆ ಕಾರಣದವರನ್ನು ಮೊದಲು ನೇಣಿಗೆ ಹಾಕಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಭಾವಿ ಪಂಧೇರ್‌ ಈ ಪ್ರಕರಣದಿಂದ ತಪ್ಪಿಸಿಕೊಂಡ. ಬಡವನಾದ  ನನ್ನ ಮಗನನ್ನು ಬಲಿಪಶು ಮಾಡಲಾಗಿದೆ’ ಎಂದು ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.