ADVERTISEMENT

ನೀತಿ ಸಂಹಿತೆ ಉಲ್ಲಂಘನೆ ಎಎಪಿಗೆ ಆಯೋಗ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST

ನವದೆಹಲಿ (ಪಿಟಿಐ): ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗೋವಾ ಚುನಾವಣಾ ರ್‍್ಯಾಲಿಯಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ನೀಡಿರುವ ಹೇಳಿಕೆಯನ್ನು   ಖಂಡಿಸಿರುವ ಚುನಾವಣಾ ಆಯೋಗವು,  ನೀತಿ ಸಂಹಿತೆಯನ್ನು ಇದೇ ರೀತಿ ಮತ್ತೆ ಉಲ್ಲಂಘಿಸಿದರೆ ಎಎಪಿಗೆ ನೀಡಿರುವ ಮಾನ್ಯತೆಯನ್ನು ಅಮಾನತು ಮಾಡಲಾ ಗುತ್ತದೆ ಅಥವಾ ರದ್ದುಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

‘ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಹಣ ಹಂಚಲು ಬರುತ್ತಾರೆ, ನೀವು (ಮತದಾರರು)  ₹ 5000 ಬದಲಿಗೆ ₹10 ಸಾವಿರ   ಕೊಡಲು ಆಗ್ರಹಿಸಬೇಕು ಹಾಗೂ ಮತವನ್ನು ಎಎಪಿಗೆ ಹಾಕಬೇಕು’ ಎಂದು ಕೇಜ್ರಿವಾಲ್ ಅವರು  ಜ. 8ರಂದು ನಡೆದ ಚುನಾವಣಾ ರ್‍್ಯಾಲಿಯಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT