ADVERTISEMENT

ನೀರು ಪೂರೈಸಲು ವಿಫಲ: ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ನಿರ್ಧರಿಸಿದ ಆಂಧ್ರ ಪ್ರದೇಶ ಸಂಸದ

ಏಜೆನ್ಸೀಸ್
Published 22 ಸೆಪ್ಟೆಂಬರ್ 2017, 3:49 IST
Last Updated 22 ಸೆಪ್ಟೆಂಬರ್ 2017, 3:49 IST
ನೀರು ಪೂರೈಸಲು ವಿಫಲ: ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ನಿರ್ಧರಿಸಿದ ಆಂಧ್ರ ಪ್ರದೇಶ ಸಂಸದ
ನೀರು ಪೂರೈಸಲು ವಿಫಲ: ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ನಿರ್ಧರಿಸಿದ ಆಂಧ್ರ ಪ್ರದೇಶ ಸಂಸದ   

ಅನಂತಪುರ: ಜಿಲ್ಲೆಯಿಂದ ತಡಿಪತ್ರಿ ನಗರಕ್ಕೆ ನೀರು ಪೂರೈಸಲು ವಿಫಲವಾದ ಕಾರಣ ಆಂಧ್ರ ಪ್ರದೇಶ ಟಿಡಿಪಿ ಸಂಸದ ಜೆ.ಸಿ.ದಿವಾಕರ್‌ ರೆಡ್ಡಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿರುವುದಾಗಿ ಹೇಳಿಕೊಂಡಿದ್ದಾರೆ.

‘ಅನಂತಪುರ ಜಿಲ್ಲೆಯ ಸಂಸದನಾಗಿ ಜನರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸೋತಿದ್ದೇನೆ. ಹಾಗಾಗಿ ಲೋಕಸಭಾ ಸ್ಪೀಕರ್‌ಗೆ ಸೋಮವಾರ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತೇನೆ’ ಎಂದು ಪ್ರಕಟಿಸಿದ್ದಾರೆ. ಕೆಲ ಶಕ್ತಿಗಳು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುವುದನ್ನು ತಡೆಯುತ್ತಿವೆ ಎಂದೂ ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.