ನವದೆಹಲಿ (ಪಿಟಿಐ): ಆರ್ಜೆಡಿ ಸದಸ್ಯ ಪಪ್ಪು ಯಾದವ್ ಅಲಿಯಾಸ್ ರಾಜೇಶ್ ರಂಜನ್ ಅವರು ಅನುಚಿತವಾಗಿ ನಡೆದುಕೊಂಡ ಘಟನೆಗೆ ಸೋಮವಾರ ಲೋಕಸಭೆ ಸಾಕ್ಷಿಯಾಯಿತು.
ಮತಾಂತರ ವಿಷಯವಾಗಿ ವಿರೋಧಪಕ್ಷಗಳ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾಗ ಪಪ್ಪು ಯಾದವ್ ಅವರು ದಿನಪತ್ರಿಕೆಯನ್ನು ಹರಿದು ಚೂರು ಮಾಡಿ ಸದನದ ತುಂಬೆಲ್ಲ ಬಿಸಾಕಿದರು.
ಅಧ್ಯಕ್ಷರ ಪೀಠದ ಮೇಲೂ ಕಾಗದದ ಚೂರುಗಳು ಬಿದ್ದವು. ಕೋಪಗೊಂಡ ಉಪಸಭಾಧ್ಯಕ್ಷ ಎ.ತಂಬಿದೊರೈ ಅವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.