ADVERTISEMENT

ಪಪ್ಪು ಯಾದವ್‌ ಅನುಚಿತ ವರ್ತನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಆರ್‌ಜೆಡಿ ಸದಸ್ಯ ಪಪ್ಪು ಯಾದವ್‌ ಅಲಿಯಾಸ್‌ ರಾಜೇಶ್‌ ರಂಜನ್‌ ಅವರು ಅನುಚಿತವಾಗಿ ನಡೆದುಕೊಂಡ ಘಟನೆಗೆ  ಸೋಮವಾರ ಲೋಕಸಭೆ ಸಾಕ್ಷಿಯಾಯಿತು.

ಮತಾಂತರ ವಿಷಯವಾಗಿ ವಿರೋಧ­ಪಕ್ಷಗಳ ಸದಸ್ಯರು ಪ್ರತಿಭಟನೆ ಮಾಡು­ತ್ತಿ­ದ್ದಾಗ ಪಪ್ಪು ಯಾದವ್‌ ಅವರು ದಿನಪತ್ರಿಕೆಯನ್ನು ಹರಿದು ಚೂರು ಮಾಡಿ ಸದನದ ತುಂಬೆಲ್ಲ ಬಿಸಾಕಿದರು.

ಅಧ್ಯಕ್ಷರ ಪೀಠದ ಮೇಲೂ ಕಾಗದದ ಚೂರುಗಳು ಬಿದ್ದವು. ಕೋಪಗೊಂಡ ಉಪಸಭಾ­ಧ್ಯಕ್ಷ ಎ.ತಂಬಿದೊರೈ ಅವರು ಕಲಾಪ­ವನ್ನು 10 ನಿಮಿಷಗಳ ಕಾಲ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.