ನವದೆಹಲಿ: ಪಾಕಿಸ್ತಾನದ ಕಲಾವಿದರ ವಿರುದ್ಧ ಎಂಎನ್ಎಸ್ ಕಿಡಿಕಾ ರಿದ ಬೆನ್ನಲ್ಲೇ, ‘ಅವರಿಗೆ ಬೂಟಿನಿಂದ ಹೊಡೆಯಿರಿ’ ಎನ್ನುವ ಮೂಲಕ ಬಿಜೆಪಿ ಶಾಸಕ ಸಂಗೀತ್ ಸೋಮ್ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
‘ಕೆಲವು ಕಲಾವಿದರು ಇಲ್ಲಿಗೆ ಬಂದು ಕೋಟ್ಯಂತರ ರೂಪಾಯಿ ಸಂಪಾದಿಸುತ್ತಾರೆ. ಪಾಕಿಸ್ತಾನದಲ್ಲಿ ಅವರನ್ನು ಯಾರೂ ಕೂಡ ಕ್ಯಾರೇ ಅನ್ನುವುದಿಲ್ಲ. ಅಂತಹವರು ಬಾಲಿವುಡ್ಗೆ ಬಂದು ಕೋಟಿ ಸಂಪಾದಿಸಿ, ಭಾರತಕ್ಕೆ ನಂಬಿಕೆ ದ್ರೋಹ ಎಸಗುತ್ತಿದ್ದಾರೆ’ ಎಂದು ಸೋಮ್ ಆಕ್ರೋಶ ವ್ಯಕ್ತಪಡಿಸಿದರು.
‘ಅವರು ಕೂಡ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಬೇಕು. ನಾವು ಇಲ್ಲೇ ತಿಂದು ಇಲ್ಲೇ ಬದುಕುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು. ಯಾವುದೇ ಬೆಲೆತೆತ್ತಾದರೂ, ಅವರನ್ನು ಬೂಟಿನಿಂದ ಹೊಡೆದು ಇಲ್ಲಿಂದ ಹೊರಗಟ್ಟಬೇಕು. ಪ್ರಾಣಿಯೂ ಯಾರದಾದರೂ ಮನೆಯಲ್ಲಿ ತಿಂದರೆ ಮಾಲೀಕನಿಗೆ ನಿಷ್ಠೆ ತೋರುತ್ತದೆ. ಪಾಕಿಸ್ತಾನಿಗಳು ಇಲ್ಲಿಯೇ ತಿಂದು ಹಿಂದಿನಿಂದ ಬೆನ್ನಿಗೆ ಚೂರಿ ಇರಿಯುತ್ತಿದ್ದಾರೆ. ಕೇವಲ ದೇಶಭಕ್ತರು ಮಾತ್ರ ಭಾರತದಲ್ಲಿ ಉಳಿಯಬೇಕು ಎಂದು ಸೋಮ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.