ADVERTISEMENT

ಪ್ರಚಾರಕ್ಕೆ ವಾರಾಣಸಿಗೆ ಹೋಗಲ್ಲ: ಪ್ರಿಯಾಂಕಾ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2014, 11:38 IST
Last Updated 26 ಏಪ್ರಿಲ್ 2014, 11:38 IST

ಅಮೇಠಿ(ಪಿಟಿಐ): ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರಮೋದಿ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಅವರ ಪರ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಶನಿವಾರ ಹೇಳಿದರು.

‘ಪ್ರಚಾರಕ್ಕೆ ವಾರಾಣಸಿಗೆ ತೆರಳುವುದಿಲ್ಲ. ಅಮೇಠಿ ಮತ್ತು ರಾಯಬರೇಲಿಯಲ್ಲಿ ಮಾತ್ರ ಪ್ರಚಾರ ನಡೆಸುವೆ’ ಎಂದು ಪ್ರಿಯಾಂಕಾ ಸುದ್ದಿಗಾರರಿಗೆ ತಿಳಿಸಿದರು.

‘ನಮ್ಮ ಈ ನೀರ್ಧಾರ ವೈಯಕ್ತಿಕವಾದುದು. ಪಕ್ಷದಿಂದ ಯಾರೇ ಕಣಕ್ಕಿಳಿದರೂ ಅವರಿಗೆ ಹೃದಯಪೂರ್ವಕ ಬೆಂಬಲ ನೀಡುತ್ತೇನೆ’ ಎಂದು ಪ್ರಿಯಾಂಕ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.