ADVERTISEMENT

ಭಟ್ಕಳ ಕರಾವಳಿ ಮೇಲೆ ನಿಗಾ: ಪರಿಕ್ಕರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2014, 19:30 IST
Last Updated 23 ನವೆಂಬರ್ 2014, 19:30 IST

ಗುಡಗಾಂವ: ಕರ್ನಾಟಕದ ಭಟ್ಕಳ ಕಡಲ ತೀರದಲ್ಲಿ ಕಳ್ಳ ಸಾಗಣೆ ಮತ್ತು ಉಗ್ರರ ಚಟು­ವ­ಟಿಕೆ ಅವ್ಯಾಹತವಾಗಿ ನಡೆ­ಯುತ್ತಿರುವ ಶಂಕೆ ಇರುವುದರಿಂದ ಇವು­ಗಳ ನಿಯಂತ್ರಣಕ್ಕೆ ಈ ಕಡಲತೀರದ ಮೇಲೆ ತೀವ್ರ ನಿಗಾ ಇಡುವಂತೆ ರಕ್ಷಣಾ ಸಚಿವ ಮನೋಹರ್ ಪರಿ­ಕ್ಕರ್‌, ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ.

ಗುಡಗಾಂವದಲ್ಲಿ ಸ್ಥಾಪಿಸಿರುವ ಭಾರತೀಯ ನೌಕಾದಳದ ರಾಷ್ಟ್ರೀಯ ಸಂವಹನ ಸಮನ್ವಯ, ನಿಯಂತ್ರಣ, ಬೇಹುಗಾರಿಕಾ ಕೇಂದ್ರ­ವನ್ನು ಭಾನು­ವಾರ ಉದ್ಘಾ­ಟಿಸಿ ಅವರು ಮಾತ­ನಾಡಿದರು. ಗೋವಾ–ಬೆಂಗ­ಳೂರು, ಗೋವಾ –ರತ್ನಗಿರಿ ವ್ಯಾಪ್ತಿಯಲ್ಲಿ ರೇಡಾರ್‌ ವ್ಯವಸ್ಥೆ ಇಲ್ಲದಿರುವುದು ಲೋಪವಾಗಿದ್ದು ಇದನ್ನು ಸರಿಪಡಿ­ಸುವುದಾಗಿ ಹೇಳಿದರು.

ಭಾರತೀಯ ಕಡಲತೀರದ ರಕ್ಷಣೆ­ಗಾಗಿ ನೌಕಾದಳ ₨ 450 ಕೋಟಿ ವೆಚ್ಚದಲ್ಲಿ ರೂಪಿಸಿರುವ ಕರಾವಳಿ ಕಣ್ಗಾವಲು ವ್ಯವಸ್ಥೆಯಲ್ಲಿ ಇನ್ನೂ ಅನೇಕ ಲೋಪದೋಷ  ಉಳಿದಿವೆ ಎಂದು  ಪರಿಕ್ಕರ್‌ ಒಪ್ಪಿಕೊಂಡರು. ಕೊರತೆಗಳನ್ನು ಸರಿ­ಪಡಿಸಿ ಕರಾವಳಿ ರಕ್ಷಣಾ ವ್ಯವಸ್ಥೆ­ಯನ್ನು ಸಂಪೂ­ರ್ಣ­ ಬಲಪಡಿ­ಸಲು ಇನ್ನೂ ಕೆಲವು ವರ್ಷ ಬೇಕಾಗಬಹುದು ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.