ಮುಂಬೈ: ಹಾಡಹಗಲೇ 11 ಜನರ ಗುಂಪೊಂದು ವ್ಯಕ್ತಿಗೆ ರಸ್ತೆ ಬದಿಯಲ್ಲೇ 27 ಬಾರಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೈದಿರುವ ಭೀಕರ ಘಟನೆ ಮಹರಾಷ್ಟ್ರದ ಧುಲೆಯಲ್ಲಿ ಮಂಗಳವಾರ ನಡೆದಿದ್ದು, ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಮೃತ ವ್ಯಕ್ತಿ ರಫೀಕುದ್ದೀನ್ ಎಂದು ಗುರುತಿಸಲಾಗಿದೆ. ಸ್ಥಳೀಯ ರೌಡಿಯಾಗಿದ್ದ ಈತನ ಮೇಲೆ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.
ರಫೀಕುದ್ದೀನ್ ಮಂಗಳವಾರ ಬೆಳಿಗ್ಗೆ ರಸ್ತೆಯ ಬದಿಯಲ್ಲಿನ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು. ಈ ವೇಳೆ ಕತ್ತಿ, ದೊಣ್ಣೆಗಳೊಂದಿಗೆ ಬೈಕಿನಲ್ಲಿ ಬಂದ 11 ಜನರ ತಂಡ ರಫೀಕುದ್ದೀನ್ ಮೇಲೆ ಹಲ್ಲೆ ನಡೆಸಿ 27 ಮಂದಿ ಕತ್ತಿಯಿಂದ ಚುಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಯಾದ ಎರಡು ದಿನಗಳ ನಂತರ ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಲಭ್ಯವಾಗಿದ್ದು, ಇದುವರೆಗೂ ಯಾವ ವ್ಯಕ್ತಿಯನ್ನು ಬಂಧಿಸಿಲ್ಲ. ಟೀ ಅಂಗಡಿಯ ಮಾಲೀಕ ಹಾಗೂ ಗ್ರಾಹಕರ ಸಹಾಯದಿಂದ ಕೆಲವು ಮಾಹಿತಿ ಕಲೆಹಾಕಿದ್ದು, ಕೆಲವು ಸ್ಥಳೀಯ ಗೂಂಡಗಳ ದ್ವೇಷವೇ ಇದಕ್ಕೆ ಕಾರಣವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.