ADVERTISEMENT

ಮಾನಸ ಸರೋವರ ಯಾತ್ರೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2014, 19:30 IST
Last Updated 29 ನವೆಂಬರ್ 2014, 19:30 IST

ಗ್ಯಾಂಗ್ಟಕ್‌ (ಪಿಟಿಐ): ಟಿಬೆಟ್‌ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಸಿಕ್ಕಿಂ–ಟಿಬೆಟ್ ಗಡಿಯಲ್ಲಿ­ರುವ ನಾಥುಲಾ ಪಾಸ್‌ ಮುಕ್ತಗೊಳಿಸ­ಲಾಗಿದ್ದು, 2015­ರಿಂದ ಈ ಮಾರ್ಗ­ವಾಗಿ ಯಾತ್ರೆ ಕೈಗೊಳ್ಳಬಹುದಾಗಿದೆ.

ನೂತನ ಮಾರ್ಗ ನಾಥುಲಾ ಪಾಸ್‌ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಅವಕಾಶ ಕಲ್ಪಿಸಲು ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದೆ. 2015ರ ಜೂನ್‌­ನಲ್ಲಿ ಈ ಮೂಲಕ ಯಾತ್ರೆಗೆ ಅವಕಾಶ ಕಲ್ಪಿಸಲು ಸಿಕ್ಕಿಂ ಸರ್ಕಾರ ಯೋಜಿಸಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.