ಚೆನ್ನೈ (ಪಿಟಿಐ): ಯುವತಿಯೊಬ್ಬಳ ವಿಕೃತಗೊಳಿಸಿದ ಚಿತ್ರವನ್ನು ಫೇಸ್ಬುಕ್ನಲ್ಲಿ ಪೋಸ್ಟ್ಮಾಡಿ, ಆಕೆಯ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೇಲಂ ಜಿಲ್ಲೆಯಲ್ಲಿ ಕೈಮಗ್ಗದ ಕೆಲಸ ಮಾಡುತ್ತಿರುವ ಸುರೇಶ್ ಬಂಧಿತ ಆರೋಪಿ. ಯುವತಿ ವಿನುಪ್ರಿಯಾ ಮದುವೆ ಪ್ರಸ್ತಾವ ತಿರಸ್ಕರಿಸಿದ ಕಾರಣಕ್ಕೆ ಸುರೇಶ್ ಆಕೆಯ ಚಿತ್ರವನ್ನು ವಿಕೃತಗೊಳಿಸಿ, ಅರೆನಗ್ನ ಸ್ಥಿತಿಯ ಚಿತ್ರವನ್ನು ಫೇಸ್ಬುಕ್ಗೆ ಹಾಕಿದ್ದ. ಇದನ್ನು ನೋಡಿ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.