ಚೆನ್ನೈ: ಅಭಿಮಾನಿಗಳು ಅಶಿಸ್ತು ಪ್ರದರ್ಶಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ನಟ ರಜನಿಕಾಂತ್ ಎಚ್ಚರಿಕೆ ನೀಡಿದ್ದಾರೆ.
ರಾಜಕೀಯ ಪ್ರವೇಶ ಕುರಿತಂತೆ ‘ಸೂಪರ್ಸ್ಟಾರ್’ ಸುಳಿವು ನೀಡಿದ ನಂತರ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲದೇ, ನಟನ ರಾಜಕೀಯ ಪ್ರವೇಶ ವಿರೋಧಿಸಿದ ನಾಯಕರ ಪ್ರತಿಕೃತಿಗಳನ್ನು ಬೆಂಕಿ ಹಚ್ಚಿದ ಪ್ರಕರಣವೂ ನಡೆದಿತ್ತು.
ಈ ಬೆಳವಣಿಗೆ ನಂತರ ‘ಆಲ್ ಇಂಡಿಯಾ ರಜನಿಕಾಂತ್ ಫ್ಯಾನ್ಸ್ ವೆಲ್ಫೇರ್ ಕ್ಲಬ್’ನ ವಿ.ಎಂ. ಸುಧಾಕರ್ ಅವರಿಗೆ ರಜನಿಕಾಂತ್ ಅವರು ಪತ್ರ ಬರೆದಿದ್ದಾರೆ.
‘ಪಕ್ಷಗಳು ನಿಮ್ಮನ್ನು ಸೇರಲಿ’
‘ಜನರು ನಿಮ್ಮ ಜತೆಗಿದ್ದಾರೆ. ನೀವು ರಾಜಕೀಯ ಪಕ್ಷಕ್ಕೆ ಸೇರುವ ಬದಲು ರಾಜಕೀಯ ಪಕ್ಷಗಳು ನಿಮ್ಮನ್ನು ಸೇರಲಿ’ ಎಂದು ರಜನಿಕಾಂತ್ಗೆ ಬಿಜೆಪಿ ನಾಯಕ, ನಟ ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.