ADVERTISEMENT

ಸಿಬಿಐ: ಬನ್ಸಲ್ ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 19:30 IST
Last Updated 22 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ರೈಲ್ವೆ ಮಂಡಳಿಯ ಸದಸ್ಯರ ನೇಮಕಾತಿಗೆ ಸಂಬಂಧಿಸಿದಂತೆ 10 ಕೋಟಿ ರೂಪಾಯಿಗಳ ಲಂಚ ಪಡೆದ ಆಪಾ­ದನೆ ಎದುರಿಸುತ್ತಿರುವ ತಮ್ಮ ಸಂಬಂಧಿ ವಿಜಯ್ ಸಿಂಗ್ಲಾ ಅವರು ನೇಮಕಾತಿ ವಿಚಾರದ ಬಗ್ಗೆ ಯಾವತ್ತೂ ತಮ್ಮ ಬಳಿ ಮಾತನಾಡಿಲ್ಲ ಎಂದು ರೈಲ್ವೆ ಖಾತೆಯ ಮಾಜಿ ಸಚಿವ ಪವನ್ ಕುಮಾರ್ ಬನ್ಸಲ್ ನ್ಯಾಯಾಲಯಕ್ಕೆ ತಿಳಿಸಿದರು.

ತಾವು ಸಚಿವರಾಗಿದ್ದಾಗ ಸಿಂಗ್ಲಾ ಮೂರು ಬಾರಿ ಭೇಟಿ ಆಗಿದ್ದರೂ ಕುಮಾರ್ ಅವರನ್ನು ರೈಲ್ವೆ ಮಂಡಳಿಯ ತಾಂತ್ರಿಕ ಸದಸ್ಯರನ್ನಾಗಿ ನೇಮಿಸುವ ಬಗ್ಗೆ ಮಾತನಾಡಿಲ್ಲ ಎಂದು ಬನ್ಸಾಲ್ ಅವರು ಸರ್ಕಾರಿ ಸಾಕ್ಷಿಯಾಗಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.