ADVERTISEMENT

ಸುಪ್ರೀಂ ತೀರ್ಪಿನ ಬಳಿಕ ಮಂದಿರ ನಿರ್ಮಾಣ: ಕಲ್‌ರಾಜ್ ಮಿಶ್ರಾ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 11:22 IST
Last Updated 8 ಫೆಬ್ರುವರಿ 2016, 11:22 IST
ಸುಪ್ರೀಂ ತೀರ್ಪಿನ ಬಳಿಕ ಮಂದಿರ ನಿರ್ಮಾಣ:  ಕಲ್‌ರಾಜ್ ಮಿಶ್ರಾ
ಸುಪ್ರೀಂ ತೀರ್ಪಿನ ಬಳಿಕ ಮಂದಿರ ನಿರ್ಮಾಣ: ಕಲ್‌ರಾಜ್ ಮಿಶ್ರಾ   

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕವಷ್ಠೆ ರಾಮಮಂದಿರ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಕಲ್‌ರಾಜ್‌ ಮಿಶ್ರಾ ಸೋಮವಾರ ತಿಳಿಸಿದ್ದಾರೆ.

ಇದೇ ಮೊದಲ ಸಲ ಬಿಜೆಪಿಯ ಸಚಿವರೊಬ್ಬರು ರಾಮ ಮಂದಿರ ವಿಷಯ ಕುರಿತಂತೆ ಮಾತನಾಡಿದ್ದಾರೆ.

ಈಗಲೇ ರಾಮ ಮಂದಿರ ನಿರ್ಮಾಣ ವಿಷಯದ ಬಗ್ಗೆ ಮಾತನಾಡಲಾಗದು. ಸುಪ್ರೀಂ ಕೋರ್ಟ್‌ ತೀರ್ಪು ಬಂದ ಬಳಿಕ ರಾಮ ಮಂದಿರ ನಿರ್ಮಾಣದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಲ್‌ರಾಜ್‌ ಮಿಶ್ರಾ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ನಡೆದಿದ್ದ ಆರ್‌ಎಸ್‌ಎಸ್‌  ವರಿಷ್ಠರ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಮೌನ ಮುರಿಯಬೇಕು ಎಂದು ಒತ್ತಡ ಹೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.