ADVERTISEMENT

ಹಳಿ ತಪ್ಪಿದ ರೈಲು: ಮುಂದುವರಿದ ಮಾರ್ಗ ದುರಸ್ತಿ, ಸಿಬ್ಬಂದಿಗೆ ಸ್ಥಳೀಯರಿಂದ ಚಹ, ಉಪಹಾರ ವಿತರಣೆ

ಏಜೆನ್ಸೀಸ್
Published 20 ಆಗಸ್ಟ್ 2017, 5:20 IST
Last Updated 20 ಆಗಸ್ಟ್ 2017, 5:20 IST
ಹಳಿ ತಪ್ಪಿದ ರೈಲು: ಮುಂದುವರಿದ ಮಾರ್ಗ ದುರಸ್ತಿ, ಸಿಬ್ಬಂದಿಗೆ ಸ್ಥಳೀಯರಿಂದ ಚಹ, ಉಪಹಾರ ವಿತರಣೆ
ಹಳಿ ತಪ್ಪಿದ ರೈಲು: ಮುಂದುವರಿದ ಮಾರ್ಗ ದುರಸ್ತಿ, ಸಿಬ್ಬಂದಿಗೆ ಸ್ಥಳೀಯರಿಂದ ಚಹ, ಉಪಹಾರ ವಿತರಣೆ   

ಲಖನೌ: ಉತ್ತರಪ್ರದೇಶದ ಮುಜಫ್ಫರ್‌ನಗರ ಬಳಿಯ ಖತೌಲಿ ಎಂಬಲ್ಲಿ ಕಳಿಂಗ ಉತ್ಕಲ್‌ ಎಕ್ಸ್‌ಪ್ರೆಸ್‌ ರೈಲು ಶನಿವಾರ ಹಳಿತಪ್ಪಿ ಹಾನಿಗೊಳಗಾಗಿದ್ದ ರೈಲು ಮಾರ್ಗದ ದುರಸ್ತಿ ಕಾರ್ಯ ನಡೆಯುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಹರಿದ್ವಾರಕ್ಕೆ ತೆರಳುತ್ತಿದ್ದ ಕಳಿಂಗ ಉತ್ಕಲ್‌ ಎಕ್ಸ್‌ಪ್ರೆಸ್‌ ರೈಲಿನ 14 ಬೋಗಿಗಳು ಉತ್ತರಪ್ರದೇಶದ ಮುಜಫ್ಫರ್‌ನಗರ ಬಳಿಯ ಖತೌಲಿ ಎಂಬಲ್ಲಿ ಶನಿವಾರ ಹಳಿತಪ್ಪಿ 23 ಪ್ರಯಾಣಿಕರು ದಾರುಣವಾಗಿ ಸಾವಿಗೀಡಾಗಿದ್ದಾರೆ. 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ರೈಲ್ವೆ ಇಲಾಖೆಯ ಸಿಬ್ಬಂದಿ ದುರಸ್ತಿಕಾರ್ಯ ಕೈಗೊಂಡಿದ್ದು, ಭಾನುವಾರವೂ ಮುಂದುವರಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.