ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧದ ಆರೋಪಗಳ ಪಟ್ಟಿಯನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ ತಯಾರಿಸಿರುವ ‘ರೆಸಿಪಿ‘ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
#RecipeforDisaster ಎಂಬ ಹೆಸರಿನಲ್ಲಿ ಕಾಂಗ್ರೆಸ್ ವಿಡಿಯೊವನ್ನು ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಕೋಮು ಸಾಮರಸ್ಯ ಹಾಳು ಮಾಡಿರುವ ಯೋಗಿ ಆದಿತ್ಯಾನಾಥ ಅವರು ಕರ್ನಾಟಕದಲ್ಲೂ ಕೋಮುವಾದವನ್ನು ಬಿತ್ತಲು ಬರುತ್ತಿದ್ದಾರೆ ಎಂಬ ಆರೋಪವನ್ನು ಈ ವಿಡಿಯೊದಲ್ಲಿ ಮಾಡಲಾಗಿದೆ.
ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ ಅವರು ಬಿಜೆಪಿಯ ತಾರಾ ಪ್ರಚಾರಕರಾಗಿರುವುದರಿಂದ ಕಾಂಗ್ರೆಸ್ ಈ ಆರೋಪ ಮಾಡಿದೆ.
#RecipeforDisaster ರೆಸಿಪಿಯಲ್ಲಿ ಅಪರಾಧ ಪ್ರಕರಣಗಳು 1 ಕೆ. ಜಿ, ಕೇಸರಿ ನೀರು 1 ಲೀಟರ್, ಮೊಸಳೆ ಕಣ್ಣೀರು 1/2 ಕಪ್ ಸೇರಿದಂತೆ ಗೋಹತ್ಯೆ ನಿಷೇಧ, ಶಾಲೆ ಮತ್ತು ಹಜ್ ಭವನದ ಗೋಡೆಯ ಕೇಸರಿಮಯ ಮಾಡಿರುವುದನ್ನು ಬಳಸಿಕೊಂಡು ರೆಸಿಪಿ ತಯಾರಿಸಿದೆ. ವಿಡಿಯೊ ಕೊನೆಯಲ್ಲಿ ‘Recipe for Disaster coming soon your state (karnataka)‘ ಎಂದು ಬರೆಯಲಾಗಿದೆ.
</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.