ಮದುರೆ: ಸಂಕ್ರಾಂತಿ ಹಬ್ಬದ ಅಂಗವಾಗಿ ತಮಿಳುನಾಡಿನ ಎರಡು ಕಡೆಗಳಲ್ಲಿ ಮಂಗಳವಾರ ನಡೆದ ಸಾಂಪ್ರದಾಯಿಕ ಜಲ್ಲಿಕಟ್ಟು ಹಾಗೂ ಮಂಜವಿರತ್ತು ಸ್ಪರ್ಧೆಯಲ್ಲಿ ಮೂವರು ಮೃತಪಟ್ಟಿದ್ದಾರೆ.
ಶಿವಗಂಗಾ ಜಿಲ್ಲೆಯ ಸಿರವಯಾಲ್ ಎಂಬಲ್ಲಿ ನಡೆದ ಮಂಜವಿರತ್ತು (ಜಲ್ಲಿಕಟ್ಟು ರೀತಿಯ ಸ್ವಲ್ಪ ವಿಭಿನ್ನವಾದ ಹೋರಿ ಬೆದರಿಸುವ ಸ್ಪರ್ಧೆ) ಸ್ಪರ್ಧೆ ವೀಕ್ಷಿಸಲು ಬಂದಿದ್ದ ಇಬ್ಬರು ಮೃತಪಟ್ಟಿದ್ದಾರೆ.
ತಿರುಚನಾಪಳ್ಳಿ ಜಿಲ್ಲೆಯ ಅವರಾಂಗಡು ಎಂಬಲ್ಲಿ ಜಲ್ಲಿಕಟ್ಟು ನೋಡಲು ಬಂದಿದ್ದ ಸೋಲೈ ಪಾಂಡಿಯನ್ ಎಂಬುವರು ಹೋರಿ ತಿವಿದು ಸಾವನ್ನಪ್ಪಿದ್ದಾರೆ.
ಇದರೊಂದಿಗೆ, ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಬಂದು ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಸೋಮವಾರ ಪಾಲಮೇಡು ಜಿಲ್ಲೆಯಲ್ಲಿ ಒಬ್ಬರು ಹೋರಿ ತಿವಿತದಿಂದ ಮೃತಪಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.