ADVERTISEMENT

2ಜಿ ತರಂಗಾಂತರ ಹಂಚಿಕೆ ಬಗ್ಗೆ ಮನಮೋಹನ್ ಸಿಂಗ್ ಮೌ‌ನವಾಗಿದ್ದೇಕೆ: ಎ. ರಾಜಾ ಪ್ರಶ್ನೆ

ಏಜೆನ್ಸೀಸ್
Published 18 ಜನವರಿ 2018, 15:38 IST
Last Updated 18 ಜನವರಿ 2018, 15:38 IST
ಎ. ರಾಜಾ (ಸಂಗ್ರಹ ಚಿತ್ರ)
ಎ. ರಾಜಾ (ಸಂಗ್ರಹ ಚಿತ್ರ)   

ನವದೆಹಲಿ: 2ಜಿ ತರಂಗಾಂತರ ಹಂಚಿಕೆ ಪ್ರಕರಣ ಸಂಬಂಧ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಮೌನವಾಗಿರುವುದೇಕೆ ಎಂದು ಆಗಿನ ದೂರಸಂಪರ್ಕ ಸಚಿವ ಎ. ರಾಜಾ ಪ್ರಶ್ನಿಸಿದ್ದಾರೆ.

2ಜಿ ಹಗರಣದಲ್ಲಿ ನಿರ್ದೋಷಿ ಎಂಬ ತೀರ್ಪು ಬಂದ ಕೆಲವೇ ದಿನಗಳಲ್ಲಿ ರಾಜಾ ಅವರು ‘2ಜಿ ಸಾಗಾ ಅನ್‌ಫೋಲ್ಡ್ಸ್’ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ವಿಚಾರಣೆ ಎದುರಿಸುತ್ತಿದ್ದ ವೇಳೆ ಅವರು ಈ ಪುಸ್ತಕವನ್ನು ಬರೆದಿದ್ದರು.

‘ಮನಮೋಹನ್ ಸಿಂಗ್ ಅವರು ದೂರಸಂಪರ್ಕ ನೀತಿಯನ್ನು ಸಮರ್ಥಿಸಿಕೊಳ್ಳುವ ಬದಲು ಮೌನಕ್ಕೆ ಶರಣಾಗಿದ್ದೇಕೆ’ ಎಂದು ಪುಸ್ತಕದಲ್ಲಿ ರಾಜಾ ಪ್ರಶ್ನಿಸಿದ್ದಾರೆ.‌

ADVERTISEMENT

‘2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಲೆಕ್ಕಾಚಾರದಲ್ಲಿ ಆಗಿನ ಮಹಾಲೇಖಪಾಲರಾಗಿದ್ದ ವಿನೋದ್ ರೈ ಅವರು ದುರುದ್ದೇಶಗಳೊಂದಿಗೆ ರಾಜಿ ಮಾಡಿಕೊಂಡಿದ್ದರು’ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.