ಕಲಬುರ್ಗಿ: ಲಾರಿ-ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಮೀಪದ ರಾಜಾಪುರ ವರ್ತುಲ ರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ತಾಲ್ಲೂಕಿನ ಶರಣಸಿರಸಗಿ ಗ್ರಾಮದ ಮಹಾದೇವ ಜಂಬಗಿ(36) ಹಾಗೂ ಅವರ ಪತ್ನಿ ಗೋದಾವರಿ(30), ಪುತ್ರರಾದ ಮಲ್ಲಿಕಾರ್ಜುನ(4), ಪೀರಪ್ಪ(ನಾಲ್ಕು ತಿಂಗಳು) ಮೃತರು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರು ಕುಸನೂರು ಗ್ರಾಮದಿಂದ ಶರಣಸಿರಸಗಿಗೆ ಹೊರಟಿತ್ತು. ಲಾರಿ ಶಹಾಬಾದ್ನಿಂದ ಕಲಬುರ್ಗಿಗೆ ಬರುತ್ತಿತ್ತು. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.