ADVERTISEMENT

ವಿಜಯ ವಿಠ್ಠಲನಿಗೆ ಕುಂಭಾಭಿಷೇಕ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಏಕಶಿಲಾ ಮೂರ್ತಿ
ಏಕಶಿಲಾ ಮೂರ್ತಿ   

ನೆಲಮಂಗಲ: ಅರಿಶಿನಕುಂಟೆಯ ವಿಶ್ವಶಾಂತಿ ಆಶ್ರಮದ ಸಂಸ್ಥಾಪಕ ಸದ್ಗುರು ಸಂತ ಭದ್ರಗಿರಿ ಕೇಶವದಾಸರ 20ನೇ ವರ್ಷದ ಪುಣ್ಯಾರಾಧನೆ, 36 ಅಡಿ ಎತ್ತರದ ಏಕಶಿಲಾ ವಿಜಯ ವಿಠ್ಠಲ ದೇವರಮಹಾ ಕುಂಭಾಭಿಷೇಕ ಹಾಗೂ ಪುಷ್ಪ ರಥೋತ್ಸವ ಗುರುವಾರದಿಂದ ಭಾನುವಾರದವರೆಗೆ ನಡೆಯಲಿದೆ ಎಂದು ಆಶ್ರಮದ ಅಧ್ಯಕ್ಷೆ ರಮಾ ಕೇಶವದಾಸ ತಿಳಿಸಿದ್ದಾರೆ.

ಕೀರ್ತನಾಚಾರ್ಯ ಲಕ್ಷ್ಮಣ್‌ ದಾಸ್‌ವೇಲಣ್‌ಕರ್‌ ಅವರಿಂದ ಆಶೀರ್ವಚನ, ವಿಶೇಷ ಭಜನೆ, ಅರಿಶಿನಕುಂಟೆ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೋಟ್‌ಬುಕ್‌ ಹಾಗೂ ಸಾಮಗ್ರಿಗಳ ವಿತರಣೆ, ಗೋಂಧಿ ಸಂಸ್ಥಾನ ಮಠದ ನಾಮದೇವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಜನೆ ನಡೆಯಲಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT