ADVERTISEMENT

ಸಾವಿನಲ್ಲೂ ಒಂದಾದ ದಂಪತಿ!

​ಪ್ರಜಾವಾಣಿ ವಾರ್ತೆ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ರೋಣ (ಗದಗ ಜಿಲ್ಲೆ): ಪತ್ನಿಯ ಸಾವಿನ ಸುದ್ದಿ ಕೇಳಿದ ಪತಿ ಒಂದು ಗಂಟೆಯ ಬಳಿಕ ಹೃದಯಘಾತದಿಂದ ಮೃತಪಟ್ಟ ಘಟನೆ ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. 
 
ಆಂಧ್ರಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕಾಗಿ ಈ ದಂಪತಿ ಗ್ರಾಮದ 25 ಜನರೊಡನೆ ಯಾತ್ರೆಗೆ ತೆರಳಿದ್ದರು. ದೇವಸ್ಥಾನದಿಂದ ಬಂದ ಬಳಿಕ ಪತ್ನಿ ಇಂದಿರಾಬಾಯಿ (59) ಬಳಲಿ ಹೃದಯಘಾತದಿಂದ ಮೃತಪಟ್ಟರೆ, ಬಸವಣ್ಣೆಪ್ಪ ಅಂದಾನಪ್ಪ ಉಗಲಾಟದ (65) ಒಂದು ಗಂಟೆಯ ಬಳಿಕ ಮೃತಪಟ್ಟಿದ್ದಾರೆ. 
ದಂಪತಿಗೆ ಪುತ್ರಿ ಮತ್ತು ಇಬ್ಬರು ಪುತ್ರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.