ADVERTISEMENT

ಸಿಂಗಪುರ ಪ್ರವಾಸ ಪೌರ ಕಾರ್ಮಿಕರಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಸಿಂಗಪುರ ಪ್ರವಾಸ ಹೊರಟಿರುವ ಪೌರ ಕಾರ್ಮಿಕರು ಈ ಅವಕಾಶ ಕಲ್ಪಿಸಿದ ಕಾರಣಕ್ಕೆ ಸಚಿವ ಈಶ್ವರ ಖಂಡ್ರೆ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಸಿಂಗಪುರ ಪ್ರವಾಸ ಹೊರಟಿರುವ ಪೌರ ಕಾರ್ಮಿಕರು ಈ ಅವಕಾಶ ಕಲ್ಪಿಸಿದ ಕಾರಣಕ್ಕೆ ಸಚಿವ ಈಶ್ವರ ಖಂಡ್ರೆ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಿಂಗಪುರ ಪ್ರವಾಸ ಹೊರಟ 38 ಪೌರ ಕಾರ್ಮಿಕರ ತಂಡವನ್ನು  ವಿಕಾಸೌಧದಲ್ಲಿ ಸೋಮವಾರ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಬೀಳ್ಕೊಟ್ಟರು.

‘ಸಿಂಗಪುರದಲ್ಲಿನ ತ್ಯಾಜ್ಯ ನಿರ್ವಹಣೆ  ಬಗ್ಗೆ ಅಧ್ಯಯನ ಮಾಡಿ ಬಂದು ಸಲಹೆಗಳನ್ನು ನೀಡಿ. ಅದೇ ರೀತಿಯಲ್ಲಿ ಸ್ವಚ್ಛತೆ ಕಾಪಾಡಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸೋಣ’ ಎಂದು  ಹೇಳಿದರು.

‘ಸಿಂಗಪುರ ಮಾತ್ರವಲ್ಲದೆ ಬೇರೆ ದೇಶಗಳಿಗೂ ಕಾರ್ಮಿಕರನ್ನು ಕರೆದೊಯ್ಯುವ ಆಲೋಚನೆ ಇದೆ. ಅಲ್ಲಿನ ಸರ್ಕಾರಗಳಿಂದ ಅನುಮತಿ ಪಡೆಯುವ ಪ್ರಯತ್ನ ನಡೆಯುತ್ತಿದೆ’ ಎಂದು ಇಲಾಖೆ ನಿರ್ದೇಶಕ  ಆರ್‌. ವಿಶಾಲ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.