ADVERTISEMENT

ಸಿದ್ದರಾಮಯ್ಯ ದುರಹಂಕಾರಿ: ಎಚ್‌.ಡಿ. ದೇವೇಗೌಡ ಕಿಡಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಸಿದ್ದರಾಮಯ್ಯ ದುರಹಂಕಾರಿ: ಎಚ್‌.ಡಿ. ದೇವೇಗೌಡ ಕಿಡಿ
ಸಿದ್ದರಾಮಯ್ಯ ದುರಹಂಕಾರಿ: ಎಚ್‌.ಡಿ. ದೇವೇಗೌಡ ಕಿಡಿ   

ಕೊಪ್ಪಳ: ‘ಸಿದ್ದರಾಮಯ್ಯ ಅವರನ್ನು ಉಪಮುಖ್ಯಮಂತ್ರಿ ಸ್ಥಾನದವರೆಗೆ ಏರಿಸಿದ್ದು ನಾವೇ ಅಲ್ಲವೇ? ಅವರೇನು ಶಾಸಕರಾಗಿದ್ದರಾ? ಈಗ ಬೆಳೆದಿದ್ದಾರೆ. ದುರಹಂಕಾರದ ಮಾತುಗಳನ್ನಾಡುತ್ತಿದ್ದಾರೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕಿಡಿಕಾರಿದರು.

‘ಜೆಡಿಎಸ್‌ನಲ್ಲಿ ಇರುತ್ತಿದ್ದರೆ ನಾನು ಯಾವತ್ತೂ ಮುಖ್ಯಮಂತ್ರಿ ಆಗುತ್ತಿರಲಿಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಗೌಡರು ಪ್ರತಿಕ್ರಿಯಿಸಿದರು.

‘ಗಂಗಾವತಿ ಶಾಸಕ ಇಕ್ಬಾಲ್‌ ಅನ್ಸಾರಿ ಅವರನ್ನು ಪಕ್ಷದಿಂದ ಉಚ್ಚಾಟಿಸುವ ವಿಚಾರವೇ ಇಲ್ಲ. ಅವರನ್ನು ಯಾವತ್ತೋ ಮರೆತಿದ್ದೇವೆ’ ಎಂದರು.

ADVERTISEMENT

‘ರಾಷ್ಟ್ರೀಯ ಪಕ್ಷಗಳೇ ಇನ್ನೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ನಾವೂ ಕೂಡಾ ಕಾರ್ಯಕರ್ತರ ಒಗ್ಗಟ್ಟು, ಕ್ಷೇತ್ರಗಳ ಅವಲೋಕನ ಮಾಡಿ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.