ರಾಮನಗರ: ‘ಅರಣ್ಯ ಇಲಾಖೆ ಭೂಮಿಯನ್ನು ನಾನು ಒತ್ತುವರಿಯೂ ಮಾಡಿಲ್ಲ, ಅಲ್ಲಿ ಗಣಿಗಾರಿಕೆಯನ್ನೂ ನಡೆಸಿಲ್ಲ’ ಎಂದು ಸಂಸದ ಡಿ.ಕೆ.ಸುರೇಶ್ ಪ್ರತಿಪಾದಿಸಿದರು.
ತಾಲ್ಲೂಕಿನ ಮಾಯಗಾನಹಳ್ಳಿಯಲ್ಲಿ ಶುಕ್ರವಾರ ನಡೆದ ಜನಸಂಪರ್ಕ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಸರ್ಕಾರ ಗುತ್ತಿಗೆ ನೀಡಿದ್ದ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಸಿದ್ದೇನೆಯೇ ಹೊರತು ಅರಣ್ಯ ಇಲಾಖೆಯ ಜಮೀನಿನಲ್ಲಿ ಅಲ್ಲ’ ಎಂದು ಹೇಳಿದರು.
‘ಗುತ್ತಿಗೆ ನೀಡಿದ್ದ ಪ್ರದೇಶ ಕಂದಾಯ ಇಲಾಖೆಯದ್ದು ಎಂಬ ದಾಖಲೆ ಪತ್ರಗಳಿವೆ. ಆ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಅರಣ್ಯ ಇಲಾಖೆಯವರು ಈಗ ವಾದಿಸುತ್ತಿದ್ದಾರೆ. ಇದರಲ್ಲಿ ನನ್ನ ತಪ್ಪೇನು ಇದೆ’ ಎಂದು ಅವರು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.