ADVERTISEMENT

'ಕಟ್ಟುವ ರಾಜಕಾರಣ ಇಂದಿನ ಅನಿವಾರ್ಯ, ಅಗತ್ಯ: ದೇವನೂರು

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 9:20 IST
Last Updated 23 ಜನವರಿ 2018, 9:20 IST
'ಕಟ್ಟುವ ರಾಜಕಾರಣ ಇಂದಿನ ಅನಿವಾರ್ಯ, ಅಗತ್ಯ: ದೇವನೂರು
'ಕಟ್ಟುವ ರಾಜಕಾರಣ ಇಂದಿನ ಅನಿವಾರ್ಯ, ಅಗತ್ಯ: ದೇವನೂರು   

ಚಿತ್ರದುರ್ಗ:  ಕಟುಕ ರಾಜಕಾರಣಕ್ಕಿಂತ ನಾಡನ್ನು, ಮನಸ್ಸುಗಳನ್ನು 'ಕಟ್ಟು'ವಂಥಹ ರಾಜಕಾರಣ ಇಂದಿನ ಅಗತ್ಯ‌ ಮತ್ತು ಅನಿವಾರ್ಯವಾಗಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯ ದೇವನೂರು ಮಹದೇವ ಪ್ರತಿಪಾದಿಸಿದರು.

ಪಕ್ಷದ ಜಿಲ್ಲಾ ಘಟಕದ ಉದ್ಘಾಟನೆಯಲ್ಲಿ ಆಶಯ ಭಾಷಣ ಮಾಡಿದ ಅವರು, 'ಕಟುಕ ಮತ್ತು ಸರ್ಜನ್ ಇಬ್ಬರೂ ಕತ್ತರಿಸುತ್ತಾರೆ. ಆದರೆ ಕಟುಕ ಜೀವ ಕೊಲ್ಲುತ್ತಾನೆ, ಸರ್ಜನ್ ಜೀವ ಉಳಿಸಲು ಕತ್ತರಿಸುತ್ತಾನೆ. ನಮಗೆ ಇವತ್ತು ಸರ್ಜನ್ ರಾಜಕಾರಣದ ಅನಿವಾರ್ಯತೆ‌ಇದೆ.

ಅಂಥ ರಾಜಕಾರಣಕ್ಕಾಗಿಯೇ ಸ್ವರಾಜ್ ಇಂಡಿಯಾ ಪಕ್ಷ ಉದಯಿಸಿದೆ' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.