ಬೀಜಿಂಗ್ (ಪಿಟಿಐ): ಅರುಣಾಚಲ ಪ್ರದೇಶದಲ್ಲಿ 54 ಹೊಸ ಗಡಿ ಠಾಣೆಗಳನ್ನು ನಿರ್ಮಿಸಲು ಹೊರಟಿರುವ ಭಾರತದ ಯೋಜನೆಗೆ ಚೀನಾ ಸೇನೆ ಗುರುವಾರ ಆಕ್ಷೇಪ ವ್ಯಕ್ತಪಡಿಸಿದೆ.
‘ಭಾರತವು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಬಾರದು. ಇದೊಂದು ವಿವಾದಿತ ಪ್ರದೇಶವಾಗಿರುವುದರಿಂದ ಶಾಂತಿ ಕಾಪಾಡಲು ಹೆಚ್ಚಿನ ಪ್ರಯತ್ನ ಮಾಡಬೇಕು’ ಎಂದು ಅದು ಹೇಳಿದೆ.
ಅರುಣಾಚಲ ಪ್ರದೇಶದ ಗಡಿಯಲ್ಲಿ 54 ಹೊಸ ಠಾಣೆಗಳ ನಿರ್ಮಾಣ ಮತ್ತು ಮೂಲಸೌಲಭ್ಯ ಕಲ್ಪಿಸಲು ₨175 ಕೋಟಿಗಳ ವೆಚ್ಚದ ಪ್ಯಾಕೇಜ್ನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಚೀನಾ ರಕ್ಷಣಾ ಸಚಿವಾಲಯ ವಕ್ತಾರ ಯಾಂಗ್ ಯುಜಿನ್ ಮೇಲಿನಂತೆ ಪ್ರತಿಕ್ರಿಯಿಸಿದರು.
‘
ಚೀನಾ–ಭಾರತ ಗಡಿಯ ಪೂರ್ವ ಭಾಗದಲ್ಲಿ ಈಗಲೂ ವಿವಾದ ಇದ್ದು, ಇಂತಹ ಪ್ರದೇಶದಲ್ಲಿ ಗಡಿ ಠಾಣೆ ನಿರ್ಮಿಸುವ ಯೋಜನೆ ಬಗೆಗಿನ ನಿರ್ದಿಷ್ಟ ವರದಿಯನ್ನು ಗಮನಿಸಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.