ADVERTISEMENT

ಹತ್ಯೆ: ಮರುತನಿಖೆ

ಪಿಟಿಐ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST

ಕೊಲಂಬೊ: ಶ್ರೀಲಂಕಾದ ‘ಸಂಡೆ ಲೀಡರ್‌’ ಪತ್ರಿಕೆ ಸಂಪಾದಕ ಲಸಂತ ವಿಕ್ರಮತುಂಗೆ ಅವರ ನಿಗೂಢ ಹತ್ಯೆ ಪ್ರಕರಣ ಸಂಬಂಧ ಹೊಸದಾಗಿ ತನಿಖೆ ನಡೆಸುವಂತೆ ಕೋರ್ಟ್‌ ಆದೇಶಿಸಿರುವ ಕಾರಣ ಏಳು ವರ್ಷಗಳ ನಂತರ ಮೃತದೇಹದ ಅವಶೇಷಗಳನ್ನು ಮಂಗಳವಾರ ಹೊರಕ್ಕೆ ತೆಗೆಯಲಾಯಿತು. 

ವಿಕ್ರಮತುಂಗೆ ಅವರ ಸಾವಿನ ಕುರಿತ ವಿಧಿವಿಜ್ಞಾನ ಪ್ರಯೋಗಾಲಯ ವರದಿಗಳು ವಿರೋಧಾಭಾಸದಿಂದ ಕೂಡಿದ್ದ ಕಾರಣ ಮರು ತನಿಖೆಗೆ ಆದೇಶಿಸುವಂತೆ ಸಿಐಡಿ ಅಧಿಕಾರಿಗಳು ಕೋರ್ಟ್‌ಗೆ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.