ADVERTISEMENT

14 ವಲಸಿಗರು ಜಲಸಮಾಧಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:50 IST
Last Updated 3 ಸೆಪ್ಟೆಂಬರ್ 2015, 19:50 IST

ಕ್ವಾಲಾಲಂಪುರ(ಎಎಫ್‌ಪಿ): ವಲಸಿಗ ರನ್ನು ಕರೆದೊಯ್ಯುತ್ತಿದ್ದ ದೋಣಿ ಮಲೇಷ್ಯಾ ಕರಾವಳಿಯಲ್ಲಿ ಮುಳುಗಿ 14 ಜನರು ಮೃತಪಟ್ಟ ಘಟನೆ ಗುರುವಾರ ನಡೆದಿದೆ. 

ದೋಣಿಯಲ್ಲಿ 100 ಜನರಿದ್ದರು. ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆ ಯಲ್ಲಿ ಜನರು ದೋಣಿಯಲ್ಲಿದ್ದದ್ದೇ ದುರ್ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಸಾಗರದ ಅಲೆಗಳ ನಡುವೆ ಮುಳು ಗಿದ ಸಣ್ಣ ಮರದ ದೋಣಿಯಲ್ಲಿದ್ದ  12ಕ್ಕೂ ಹೆಚ್ಚು ಇಂಡೊನೇಷ್ಯಾ ಪ್ರಜೆಗಳನ್ನು ರಕ್ಷಿಸಲಾಗಿದೆ.
ಸ್ಥಳೀಯ ಮೀನುಗಾರರು 15 ಜನ ರನ್ನು ರಕ್ಷಿಸಿದ್ದಾರೆ. 14 ಮೃತದೇಹಗಳು ಪತ್ತೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.